ಡಿಕೆಶಿ ವಿರುದ್ಧ ಯಾವುದೇ ಪ್ರಕರಣ ಮುಕ್ತವಾಗಿಲ್ಲ : ಸಚಿವ ಜಗದೀಶ್ ಶೆಟ್ಟರ ಟಾಂಗ್

ಹುಬ್ಬಳ್ಳಿ, ಆಗಸ್ಟ್, 23, 2020(www.justkannada.in) : ಜೈಲಲ್ಲಿದ್ದು, ಬಂದು ಇನ್ನೋಬ್ಬರ ನೈತಿಕತೆ ಬಗ್ಗೆ ಮಾತನಾಡುವ ಅಧಿಕಾರ ನಿಮಗಿಲ್ಲ. ಬೇಲ್ ಮೇಲೆ ಹೊರಗಿದ್ದೇನೆ ಎಂಬುದನ್ನು ಡಿಕೆಶಿ ಅರತುಕೊಳ್ಳಲಿ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ ಆಕ್ರೋಶವ್ಯಕ್ತಪಡಿಸಿದ್ದಾರೆ.

 Dikeshi-against-No-case-open-Minister-Jagadish-Shettar-Tong

ಡಿಕೆಶಿ ತಮ್ಮ ಫೋನ್ ಟ್ಯಾಪಿಂಗ್ ಮಾಡಲಾಗುತ್ತಿದೆ ಎಂದು ದೂರಿದ ಹಿನ್ನೆಲೆಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿ, ಡಿಕೆಶಿ ವಿರುದ್ಧ ಯಾವುದೇ ಪ್ರಕರಣ ಮುಕ್ತವಾಗಿಲ್ಲ ಎಂಬುದನ್ನು ಅರಿತುಕೊಳ್ಳಲಿ. ಗಲಭೆ ಕೋರರ ಬೆನ್ನಿಗೆ ನಿಂತು ಪೊಲೀಸರ ಮೇಲೆ ಧಮ್ಕಿ ಹಾಕುವುದು ಸರಿಯಲ್ಲ.

jk-logo-justkannada-logo

ಕನಕಪುರದ ಗೂಂಡಾಗಿರಿ ಬೆಂಗಳೂರಿನಲ್ಲಿ ನಡೆಯಲ್ಲ. ರಾಜ್ಯ ಸರಕಾರದ ಯಶಸ್ಸು ಸಹಿಸಲಾಗದೇ ಹೀಗಾಡುತ್ತಿದ್ದಾರೆ. ‘ಪರೋಕ್ಷವಾಗಿ ಗಲಭೆಕೋರರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

Key words : Dikeshi-against-No-case-open-Minister-Jagadish-Shettar-Tong