ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಗೆ ಸೋಲು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ.

ರಾಮನಗರ,ನವೆಂಬರ್,2,2021(www.justkannada.in):  ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಉಪಚುನಾವಣೆಯಲ್ಲಿ ಜೆಡಿಎಸ್  ಹೀನಾಯ ಸೋಲನುಭವಿಸಿದ್ದು ಈ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ರಾಮನಗರ ಜಿಲ್ಲೆ ಬಿಡದಿಯ ಕೇತಗಾನಹಳ್ಳಿಯಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ಬೈ ಎಲೆಕ್ಷನ್ ಫಲಿತಾಂಶ ನಿರೀಕ್ಷಿಸಿರಲಿಲ್ಲ. ಸಂಘಟನೆಯಲ್ಲಿ ಕೊರತೆ ಉಂಟಾಗಿತ್ತು.  ನಾನು ಕಾರ್ಯಕರ್ತರ ಒತ್ತಾಸೆ ಮೇಲೆ ಅಭ್ಯರ್ಥಿಗಳನ್ನ ಹಾಕಿದ್ದೆ. ಹಾನಗಲ್ ನಲ್ಲಿ ನಮಗೆ ತಳಹದಿಯೇ ಇಲ್ಲ. ನಾನು ಉಪಚುನಾವಣೆಗೆ ಹೆಚ್ಚಿನ ಆದ್ಯತೆ ನೀಡಲ್ಲ ಎಂದು ತಿಳಿಸಿದರು.

Key words: Defeat -JDS – two -by-elections-Former CM -HD Kumaraswamy