ಸಂಕಷ್ಟದಲ್ಲಿರುವ ಪತ್ರಕರ್ತರಿಗೂ ನೆರವು ಘೋಷಿಸಿ- ಸಿಎಂ ಬಿಎಸ್ ವೈಗೆ ಶಿವಾನಂದ ತಗಡೂರು ಮನವಿ…

kannada t-shirts

ಬೆಂಗಳೂರು,ಮೇ,22,2021(www.justkannada.in):  ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಪತ್ರಕರ್ತರಿಗೂ ನೆರವು ನೀಡಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮನವಿ ಮಾಡಿದ್ದಾರೆ.declare-compensation-journalists-kuwj-president-shivananda-tagadur-appeal-cm-bs-yeddyurappa

ಈ ಕುರಿತು ಸಿಎಂ ಬಿಎಸ್ ವೈ ಅವರಿಗೆ ಪತ್ರ ಬರೆದಿರುವ KUWJ ಅಧ್ಯಕ್ಷ ಶಿವಾನಂದ ತಗಡೂರು, ಕೋವಿಡ್ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ಮನವಿ ಮೇರೆಗೆ, ಪತ್ರಕರ್ತರನ್ನು ಫ್ರಂಟ್ ಲೈನ್ ವಾರಿಯರ್ಸ್‌ ಎಂದು ಘೋಷಣೆ ಮಾಡಿ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯ ಮತ್ತು ಅಭಿನಂದನೆಗಳು.

ಕೋವಿಡ್ ಲಾಕ್ ಡೌನ್ ಕಾರಣದಿಂದಾಗಿ ಮಾಧ್ಯಮಗಳು ಸಂಕಷ್ಟದಲ್ಲಿ ಸಿಲುಕಿದ್ದು, ಇದೇ ವೃತ್ತಿ ಅವಲಂಬಿಸಿರುವ ಹಲವು ಪತ್ರಕರ್ತರ ಬದುಕು ಕೂಡ ಅಯೋಮಯವಾಗಿದೆ. ಗ್ರಾಮೀಣ ಪತ್ರಕರ್ತರ ಪರಿಸ್ಥಿತಿ ಕೂಡ ಬಹಳ ಕಷ್ಟದಲ್ಲಿದೆ.declare-compensation-journalists-kuwj-president-shivananda-tagadur-appeal-cm-bs-yeddyurappa

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ, ಪತ್ರಕರ್ತರಿಗೆ ತಲಾ 10 ಸಾವಿರ ನೆರವು ನೀಡಬೇಕು. ಕುಟುಂಬ ನಿರ್ವಹಣೆಗೆ ಅಗತ್ಯವಾದ ಪಡಿತರವನ್ನು (ಜಿಲ್ಲಾ, ತಾಲ್ಲೂಕು, ಗ್ರಾಪಂ ಮಟ್ಟದಲ್ಲಿಯೂ) ನೀಡುವ ವ್ಯವಸ್ಥೆ ಆಗಬೇಕು. ಮಾಧ್ಯಮಕ್ಕೆ ಆದ್ಯತೆ ಮೇಲೆ ಜಾಹೀರಾತು ನೀಡುವ ಮೂಲಕ ನೆರವಾಗಬೇಕು ಎಂದು  ಶಿವಾನಂದ ತಗಡೂರು ಒತ್ತಾಯಿಸಿದ್ದಾರೆ.

Key words: Declare – compensation- journalists-KUWJ-President- Shivananda Tagadur -appeal -CM BS Yeddyurappa

website developers in mysore