“ಸುವರ್ಣವತಿ ಡ್ಯಾಂ ಬಳಿ ನಡೆದ ಭೀಕರ ರಸ್ತೆ ಅಪಘಾತ” : ಮೂವರು ಸ್ಥಳದಲ್ಲಿ ಸಾವು…!

ಚಾಮರಾಜನಗರ,ಜನವರಿ,08,2021(www.justkannada.in) : ಜಿಲ್ಲೆಯ ಸುವರ್ಣವತಿ ಡ್ಯಾಂ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.jk-logo-justkannada-mysoreತಿರುಪ್ಪುರ್​ನಿಂದ ಶುಕ್ರವಾರ ಬೆಳ್ಳಂಬೆಳಗ್ಗೆ ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಪೂಜೆ ಸಲ್ಲಿಸಲು ಹೊರಟವರ ಟೆಂಪೋ ಟ್ರಾವೆಲರ್​ ಮುಂಜಾನೆ 4 ಗಂಟೆ ಸಮಯದಲ್ಲಿ ವಾಹನ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ.‌

ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು,14 ಮಂದಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Dam,suvarnavathi,near,Terrible,Road,Accident,Three,place,Death

ಮೃತರನ್ನು ತಿರುಪ್ಪುರ್ ನ ಸುಬ್ರಮಣ್ಯ(75), ಅಮರಾವತಿ(65) ಪುತ್ರಿ ಕೋಕಿಲ(40) ಎಂದು ಗುರುತಿಸಲಾಗಿದೆ. ಗಾಯಾಳುಗಳಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಚಾಮರಾಜನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

key words : Dam-suvarnavathi-near-Terrible-Road-Accident-Three-place-
Death …!