“ಎಲ್ಲಾ ಟೀಕೆಗಳಿಗೆ ಉತ್ತರ ಕೊಡಬೇಕು ಎಂದೇನಿಲ್ಲ” : ಎಂ.ಬಿ.ಪಾಟೀಲ್ ವಿರುದ್ಧ ಜಗದೀಶ್ ಶೆಟ್ಟರ್ ಕಿಡಿ

ಬೆಂಗಳೂರು,ಏಪ್ರಿಲ್,06,2021(www.justkannada.in) : ಎಂ.ಬಿ.ಪಾಟೀಲ್ ಅವರ ಎಲ್ಲಾ ಟೀಕೆಗಳಿಗೆ ಉತ್ತರ ಕೊಡಬೇಕು ಎಂದೇನಿಲ್ಲ. ಚುನಾವಣೆಯಲ್ಲಿ ಗೆದ್ದು ತೋರಿಸಲಿ. ಅದರ ಮೇಲೆ ಕಾಂಗ್ರೆಸ್ ಶಕ್ತಿ ಏನು ಎಂಬುದು ಗೊತ್ತಾಗುತ್ತದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸವಾಲು ಹಾಕಿದ್ದಾರೆ.

Illegally,Sand,carrying,Truck,Seized,arrest,driverಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ಹೇಳಿದ್ದು ಎಲ್ಲವೂ ವೇದವಾಕ್ಯ ಅಲ್ಲ. ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕುವ ಪಾಟೀಲರು ಮೊದಲು ಈಗ ನಡೆಯುವ ಮೂರು ಉಪಚುನಾವಣೆಗಳನ್ನು ಗೆದ್ದು ತೋರಿಸಲಿ ಎಂದರು 

criticism-answered-Not necessarily-Jagdish Shetter-sparkles-against-M.B.Patil 

ಮೂರು ಉಪಚುನಾವಣೆಗಳನ್ನು ಸಹ ನಾವೇ ಗೆಲ್ಲುತ್ತೇವೆ

ಹಿಂದೆ ನಡೆದ 15 ಉಪಚುನಾವಣೆಗಳಲ್ಲಿ ನಾವು ಗೆದ್ದಿದ್ದೇವೆಈಗ ಮೂರು ಉಪಚುನಾವಣೆಗಳನ್ನು ಸಹ ನಾವೇ ಗೆಲ್ಲುತ್ತೇವೆ. ವಾತಾವರಣ ನಮ್ಮ ಪರವಾಗಿದೆ. ಹೀಗಿರುವಾಗ ಹೊಸದಾಗಿ ಅಸೆಂಬ್ಲಿ ಚುನಾವಣೆ ಮಾಡುವುದು ಬೇಡ. ಈಗ ಮೂರು ಚುನಾವಣೆಗಳಲ್ಲಿ ಗೆದ್ದು ತೋರಿಸಲಿ ಎಂದಿದ್ದಾರೆ.

 

key words : criticism-answered-Not necessarily-Jagdish Shetter-sparkles-against-M.B.Patil