ಕೋವಿಡ್ ಭೀತಿ: ಇಂದು ಸಂಜೆ ಅಥವಾ ನಾಳೆ ಗೈಡ್ ಲೈನ್ ಬಿಡುಗಡೆ- ಸಚಿವ ಆರ್.ಅಶೋಕ್.

ಬೆಳಗಾವಿ,ಡಿಸೆಂಬರ್,26,2022(www.justkannada.in): ಕೋವಿಡ್ ಬಗ್ಗೆ ಆತಂಕ ಪಡುವುದು ಬೇಡ. ಹೊಸ ವರ್ಷಕ್ಕೆ  ಇಂದು ಸಂಜೆ ಅಥವಾ ನಾಳೆ ಗೈಡ್ ಲೈನ್ ಬಿಡುಗಡೆ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್.ಅಶೋಕ್, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಭೆ ಮಾಡುತ್ತಿದ್ದೇವೆ.  ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಜನ ಸಹಕರಿಸಿದರೆ ಕೋವಿಡ್ ತಡೆಯಬಹುದು. ಸದ್ಯಕ್ಕೆ  ಯಾವುದೇ ಕಠಿಣ ನಿರ್ಬಂಧ ಹಾಕಲ್ಲ. ಎಲ್ಲರೂ ಮಾಸ್ಕ್ ಸ್ಯಾನಿಟೈಸರ್ ಬಳಸಿ ಎಂದು ಮನವಿ ಮಾಡಿದರು.

Key words: covid  -Release -guide line –Minister- R. Ashok.