ನೀವು ಉಳಿಯುತ್ತೀರೊ ಇಲ್ವೊ ಗೊತ್ತಿಲ್ಲ: ನಾನಂತು ಉಳಿಬೇಕು ಎಂದ ಸಚಿವ ಉಮೇಶ್ ಕತ್ತಿ…

ಬಾಗಲಕೋಟೆ,ಮೇ,8,2021(www.justkannada.in) : ಕೋವಿಡ್ ಮೂರನೇ ಅಲೆ ಬರುತ್ತೆ. ನೀವು ಉಳಿಯುತ್ತಿರೋ ಇಲ್ಲವೋ ಗೊತ್ತಿಲ್ಲ. ನಾನು ಉಳಿಯಬೇಕು ಎಂದು ಆಹಾರ ಸಚಿವ ಉಮೇಶ ಕತ್ತಿ  ವ್ಯಂಗ್ಯವಾಗಿ ಹೇಳಿದರು.jk

ಇಂದು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ನಡೆದ ಸಭೆಯೊಂದರಲ್ಲಿ ಆಹಾರ ಸಚಿವ ಉಮೇಶ್ ಕತ್ತಿ ಈ ರೀತಿ ಹೇಳಿಕೆ ನೀಡಿದ್ದಾರೆ.  ಸ್ಥಳೀಯರು ಆಕ್ಷಿಜನ್ ಸಾಂದ್ರಕ ಯಂತ್ರವನ್ನು ಸರಕಾರಿ ಆಸ್ಪತ್ರೆಗೆ ದೇಣಿಗೆಯಾಗಿ ನೀಡಿದ್ದರು. ಈ ವೇಳೆ ರಬಕವಿಯ ಖಾಸಗಿ ವೈದ್ಯರೊಬ್ಬರು ಮಾತನಾಡುವ ಸಂದರ್ಭದಲ್ಲಿ, ಆಕ್ಸಿಜನ್ ಸಾಂದ್ರಕ ಯಂತ್ರಗಳನ್ನು ಸಹ ಸರ್ಕಾರ ಹೆಚ್ಚು ನೀಡಬೇಕು ಇದರಿಂದ ಕೋವಿಡ್ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದರು.covid-Don't -know - I want – stay- Minister Umesh katti

ಆಗ ಸಚಿವರು ಮೂರನೇ ಅಲೆ ಬಂದ ಮೇಲೆ ನೋಡೋಣ ಎಂದರು. ಆಗ ವೈದ್ಯರು ಆವಾಗ ನಾವು ಉಳಿದರೆ ನೋಡೋಣ ಎಂದಾಗ ಸಚಿವರು ನೀವು ಉಳಿಯುತ್ತಿರೋ ಇಲ್ಲವೋ ನಾನಂತು ಉಳಿಯಬೇಕು ಎಂದು ಹಾಸ್ಯಾಸ್ಪದವಾಗಿ ಹೇಳಿದರು.

Key words: covid-Don’t -know – I want – stay- Minister Umesh katti