ಸಾಂಪ್ರಾದಾಯಿಕವಾಗಿ ಶರನ್ನವರಾತ್ರಿ ಪೂಜಾ ಕಾರ್ಯಕ್ರಮ: ಈ ವೇಳೆ ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ಅವಕಾಶವಿಲ್ಲ- ಪ್ರಮೋದಾದೇವಿ ಒಡೆಯರ್…

ಮೈಸೂರು,ಅಕ್ಟೋಬರ್ 5,2020(www.justkannada.in):  ಕೊರೋನಾ ಹಿನ್ನೆಲೆ ಈ ಬಾರಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆಗೆ ಸರ್ಕಾರ ಮುಂದಾಗಿದ್ದು, ಈ ನಡುವೆ ಮೈಸೂರು ಅರಮನೆಯಲ್ಲಿ ಶರನ್ನವರಾತ್ರಿ ಸಂದರ್ಭದಲ್ಲಿ ನಡೆಯುವ ಪೂಜಾ ಕಾರ್ಯಗಳಿಗೆ ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ಅವಕಾಶವಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.covid -19- public - media -not allowed - traditional dasara- worship- Pramodadevi Wodeyar

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ಮೈಸೂರಿನಲ್ಲಿ ಹೆಚ್ಚನ ಕೊರೋನಾ ಪ್ರಕರಣ ಹೆಚ್ಚಾಗಿರುವ ದೃಷ್ಟಿಯಿಂದ ಮೈಸೂರಿನ ಅರಮನೆಯಲ್ಲಿ 2020 ಸಾಲಿನ ಶರನ್ನವರಾತ್ರಿ ಸಂದರ್ಭದಲ್ಲಿ ಪೂಜಾವಿಧಿಗಳನ್ನು ಕೇವಲ ಸಾಂಪ್ರದಾಯಕವಾಗಿ ನಡೆಸಲಾಗುವುದು.  ಕೊರೋನಾ ಹಿನ್ನೆಲೆ ಮುನ್ನೆಚ್ಚರ ಕ್ರಮ ಅತಿ ಅವಶ್ಯವಾಗಿರುವುದರಿಂದ ಆಚರಣೆಯಲ್ಲಿ, ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ಸಾರ್ವಜನಿಕರ ಮತ್ತು ಮಾಧ್ಯಮದವರ ಭಾಗವಹಿಸುವಿಕೆ ಇರುವುದಿಲ್ಲ.  ಕೋವಿಡ್-19 ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ  ಈ ಕ್ರಮ ಅನಿವಾರ್ಯವಾಗಿದೆ ಎಂದು ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.covid -19- public - media -not allowed - traditional dasara- worship- Pramodadevi Wodeyar

Key words: covid -19- public – media -not allowed – traditional dasara- worship- Pramodadevi Wodeyar