ಕೋವಿಡ್ 19 – ಆರ್ಥಿಕ ಸ್ಪಂದನ ಕಾರ್ಯಕ್ರಮ: ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಚೆಕ್ ವಿತರಿಸಿದ ಸಚಿವ ಎಸ್.ಟಿ ಸೋಮಶೇಖರ್…

kannada t-shirts

ಮೈಸೂರು, ಅಕ್ಟೋಬರ್,2,2020(www.justkannada.in): ಮೈಸೂರು ವಿಭಾಗದ ಕೋವಿಡ್ 19 – ಆರ್ಥಿಕ ಸ್ಪಂದನ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿ ಎಸ್.ಟಿ.ಸೋಮಶೇಖರ್ ಚೆಕ್ ವಿತರಿಸಿದರು.jk-logo-justkannada-logo

ಮೈಸೂರು ವಿಭಾಗದ  ವಿವಿಧ ಸಹಕಾರ ಕೇಂದ್ರ ಬ್ಯಾಂಕ್ ಗಳ ವತಿಯಿಂದ 8 ಜಿಲ್ಲೆಯ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು. ಅರ್ಹ ಫಲಾನುಭವಿಗಳಿಗೆ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಜಿ.ಟಿ ದೇವೇಗೌಡ, ಶಾಸಕ ರಾಮದಾಸ್, ಶಾಸಕ ನಾಗೇಂದ್ರ ಚೆಕ್ ನೀಡಿದರು.covid-19-financial-responsibility-program-minister-st-somashekhar-distributed-checks-mysore

ಬಳಿಕ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಬಹಳ ಮುಖ್ಯ. ಕೋವಿಡ್ 19 ರ ಪರಿಹಾರ ನಿಧಿಗೆ ಸಹಕಾರಿ ಸಂಸ್ಥೆಗಳ ವತಿಯಿಂದ 53 ಕೋಟಿ ದೇಣಿಗೆ ನೀಡಲಾಗಿದೆ. ರಾಜ್ಯದ ಸುಮಾರು 42,524 ಆಶಾ ಕಾರ್ಯಕರ್ತೆಯರಿಗೆ ತಲಾ 3000 ರೂ ಒಟ್ಟು ಗಳಂತೆ 12.75 ಕೋಟಿ ಪ್ರೋತ್ಸಾಹ ಧನ ಪಾವತಿಸಲಾಗಿದೆ. ಈ ಯೋಜನೆಯಡಿಯಲ್ಲಿ ವಿಶೇಷವಾಗಿ ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸುವುದು. ಹಾಗೂ ಈ ಯೋಜನೆಯಡಿ ರಾಜ್ಯದ 40,000 ರೈತರಿಗೆ 100 ಕೋಟಿ ಸಾಲ ಮಂಜೂರು ಮಾಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

Key words: covid 19 – Financial- Responsibility –Program-Minister- ST Somashekhar -distributed -checks -mysore

website developers in mysore