ಕೊನೆಗೂ ಫಲಿಸಲಿಲ್ಲ ಪುತ್ರಿ ಮಾಡಿದ ಪ್ರಾರ್ಥನೆ: ಕೊರೋನಾಗೆ ತುತ್ತಾಗಿದ್ದ ಶಿಕ್ಷಕಿ ಸಾವು….

kannada t-shirts

ಮಂಗಳೂರು,ಅಕ್ಟೋಬರ್,16,2020(www.justkannada.in): ವಿದ್ಯಾಗಮ ಯೋಜನೆಯಡಿ ಮಕ್ಕಳಿಗೆ ಪಾಠ ಮಾಡಲು ಹೋಗಿ ಕೊರೋನಾಗೆ ತುತ್ತಾಗಿ ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಕ್ಷಕಿ ಪದ್ಮಾಕ್ಷಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.jk-logo-justkannada-logo

ವಿದ್ಯಾಗಮ ಯೋಜನೆಯಡಿ ಪಾಠ ಮಾಡಲು ಹೋಗುತ್ತಿದ್ದ ಶಿಕ್ಷಕಿ ಪದ್ಮಾಕ್ಷಿ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ಹೀಗಾಗಿ ಶಿಕ್ಷಕಿ ಪದ್ಮಾಕ್ಷಿ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಪದ್ಮಾಕ್ಷಿ ಅವರಿಗೆ ಶ್ವಾಸಕೋಶದ ತೊಂದರೆ ಇತ್ತು ಎನ್ನಲಾಗಿದೆ.Corona- teacher -dies – teach- children-mangalore

ಈ ಮಧ್ಯೆ ತಾಯಿಯನ್ನ ಬದುಕಿಸಿಕೊಡುವಂತೆ ಪದ್ಮಾಕ್ಷಿ ಅವರ ಪುತ್ರಿ ಐಶ್ವರ್ಯ ಫೇಸ್ ಬುಕ್ ನಲ್ಲಿ ಮನವಿ ಮಾಡಿದ್ದರು. ಫೇಸ್ ಬುಕ್ ನಲ್ಲಿ ಮನವಿ ಮಾಡಿಕೊಂಡ ಹಿನ್ನೆಲೆ ಸರ್ಕಾರ ಶಿಕ್ಷಕಿಯ ಚಿಕಿತ್ಸಾ ವೆಚ್ಚವನ್ನ ಭರಿಸುವುದಾಗಿ ಭರವಸೆ ನೀಡಿತ್ತು. ಆದರೆ ಇದೀಗ ಶಿಕ್ಷಕಿ ಪದ್ಮಾಕ್ಷಿ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಪುತ್ರಿ ಮಾಡಿದ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ.  ಶಿಕ್ಷಕಿ ಪದ್ಮಾಕ್ಷಿ ಮಕ್ಕಿ ಜವಹರ್ ನೆಹರು  ಶಾಲೆಯ ಶಿಕ್ಷಕಿಯಾಗಿದ್ದರು.

Key words: Corona- teacher -dies – teach- children-mangalore

website developers in mysore