ಕೊರೋನಾ ಕಣ್ಮರೆಯಾಗಲಿ: ‘ಗೌರಿ’ ನೆನೆದು ಮಹಿಳೆಯರಿಗೆ ಬಾಗಿನ ವಿತರಣೆ…

ಮೈಸೂರು,ಆ,19,2020(www.justkannada.in):  ಕೊರೋನಾ ಮಹಾಮಾರಿಯಿಂದಾಗಿ ಈ ಬಾರಿ ಗೌರಿಗಣೇಶ ಹಬ್ಬದ ಸಂಭ್ರಮ ಕಡಿಮೆಯಾಗಿದ್ದು, ಗಣೇಶ ಪ್ರತಿಷ್ಟಾಪನೆಗೆ ರಾಜ್ಯ ಸರ್ಕಾರ ಕೆಲ ನಿರ್ಬಂಧಗಳನ್ನ ವಿಧಿಸಿದೆ. ಈ ಮಧ್ಯೆ ದೇಶದಿಂದ ಕೊರೋನಾ ಮಹಾಮಾರಿ ತೊಲಗಲೆಂದು  ಮೈಸೂರಿನಲ್ಲಿ ಮಹಿಳಾ ಸೇವಾ ಪ್ರತಿಷ್ಠಾನ ವಿನೂತನ ಕಾರ್ಯಕ್ರಮ ಆಯೋಜಿಸಿತ್ತು.jk-logo-justkannada-logo

ದೇಶದಲ್ಲಿ ಕೊರೊನಾ ಮಹಾಮಾರಿ ತೊಲಗಲೆಂದು ಪ್ರಾರ್ಥಿಸಿ ಗೌರಿ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಮಹಿಳಾ ಸೇವಾ ಪ್ರತಿಷ್ಠಾನ ವತಿಯಿಂದ  ಬಾಗಿನ ವಿತರಣೆ ಮಾಡಲಾಯಿತು. ಮೈಸೂರಿನ ರಾಮಕೃಷ್ಣ ನಗರದ ಯೋಗ ಪಾರ್ಕ್ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.Corona-  Gauri festival- bagina-distribution - Women's Service Foundation

ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಪದಾಧಿಕಾರಿ ಸರಸ್ವತಿ ನೇತೃತ್ವದಲ್ಲಿ  ಗೌರಿ ದೇವಿಯನ್ನ ನೆನೆದು ಮಹಿಳೆಯರಿಗೆ ಬಾಗಿನ ವಿತರಣೆ ಮಾಡಲಾಯಿತು. ಟ್ರಸ್ಟ್ ಮಹಿಳೆಯರು  ಕುಂಕುಮ ಅರಿಸಿನ ಇಟ್ಟು ಬಾಗಿನ ವಿತರಣೆ ಮಾಡುವ ಮೂಲಕ  ದೇಶದಿಂದ ಕೊರೋನಾ ಕಣ್ಮರೆಯಾಗಲೆಂದು ಪ್ರಾರ್ಥಿಸಿದರು.

Key words: Corona-  Gauri festival- bagina-distribution – Women’s Service Foundation