ಮತಾಂಧರ ಶಕ್ತಿಗಳ ಓಲೈಕೆಯನ್ನ ಬಂಡವಾಳ ಮಾಡಿಕೊಂಡಿರುವ ನಿಮ್ಮಿಂದ ನಾವು ಸಂವಿಧಾನ ಪಾಠ ಕಲಿಯಬೇಕಿಲ್ಲ-ಸಿದ್ಧರಾಮಯ್ಯಗೆ ಕೆ.ಜಿ ಬೋಪಯ್ಯ ಟಾಂಗ್.

kannada t-shirts

ಕೊಡಗು,ಮೇ,17,2022(www.justkannada.in):  ಸಿದ್ಧರಾಮಯ್ಯನವರೇ, ನೀವು ತಮ್ಮ ಆಡಳಿತದಲ್ಲಿ ಮತಾಂಧರ ಶಕ್ತಿಗಳನ್ನು ಓಲೈಕೆಯನ್ನೇ ಬಂಡವಾಳ ಮಾಡಿಕೊಂಡು ಬಂದಿರುವ ನಿಮ್ಮಿಂದ ನಾವು ಸಂವಿಧಾನದ ಪಾಠ ಕಲಿಯಬೇಕಿಲ್ಲ ಎಂದು ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಕಿಡಿಕಾರಿದ್ದಾರೆ.

ಸರಣಿ ಟ್ವಿಟ್ ಮಾಡಿ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಕೆ.ಜಿ ಬೋಪಯ್ಯ, ಸಿದ್ಧರಾಮಯ್ಯನವರೇ, ನೀವು ತಮ್ಮ ಆಡಳಿತದಲ್ಲಿ ಮತಾಂಧರ ಶಕ್ತಿಗಳನ್ನು ಓಲೈಕೆಯನ್ನೇ ಬಂಡವಾಳ ಮಾಡಿಕೊಂಡು ಬಂದಿರುವ ನಿಮ್ಮಿಂದ ನಾವು ಸಂವಿಧಾನದ ಪಾಠ ಕಲಿಯಬೇಕಿಲ್ಲ. ಬದ್ಧತೆ, ಸಿದ್ಧಾಂತದ ವಿಚಾರದಲ್ಲಿ ನಮಗೆ ಸಂಘ ಏನು ಕಲಿಸಿಕೊಡಬೇಕು ಅದನ್ನು ಕಲಿಸಿಕೊಟ್ಟಿದೆ, ನಾವು ಅದಕ್ಕೆ ಬದ್ಧರಾಗಿದ್ದೇವೆ.

ನಮ್ಮ ಕಾರ್ಯಕರ್ತರು ಬಂದೂಕು ತಗೆದುಕೊಂಡು ಡಿಜೆ ಹಳ್ಳಿ ಕೆಜಿ ಹಳ್ಳಿ ತರಹ ದಲಿತರ ಮನೆ ಎಂದಿಗೂ ನುಗ್ಗಿಲ್ಲ. ಗೌರಿಪಾಳ್ಯ,ಮಂಗಳೂರಿನಲ್ಲಿ ಗಲಭೆ, ಹರ್ಷನ ಹತ್ಯೆ ಮಾಡಿದ ಮುಸಲ್ಮಾನರು ನಂತರದಲ್ಲಿ ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ದಾಳಿ ಮಾಡಿ ಹತ್ಯೆ ಮಾಡಲು ಯತ್ನಿಸಿದಾಗ ಎಲ್ಲಿ ಹೋಗಿತ್ತು ನಿಮ್ಮ ಬದ್ಧತೆ? ಎಂದು ಪ್ರಶ್ನಿಸಿದ್ದಾರೆ.

ಕಳೆದವಾರ ಸರ್ಕಾರಿ ಕಛೇರಿಗೆ ನುಗ್ಗಿ ಕಾಶ್ಮೀರಿ ಪಂಡಿತರ ಹತ್ಯೆ ನಡೆದಾಗ ಎಲ್ಲಿ ಹೋಗಿತ್ತು ನಿಮ್ಮ ಬದ್ಧತೆ. ನಿಮ್ಮಂತೆ ಸ್ಕ್ರ್ಯೂ ಡ್ರೈವರ್ ಹೋಂ ಮಿನಿಸ್ಟರ್ ಇರುವ ಸರ್ಕಾರ ನಮ್ಮದಲ್ಲ, ನಮ್ಮ ಗೃಹ ಸಚಿವರು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಸಮರ್ಥ ಗೃಹ ಸಚಿವರು.

ಬಡ ರೈತರ ಕೊಟ್ಟಿಗಳಿಗೆ ನುಗ್ಗಿ ಬೆದರಿಸಿ ಗೋವುಗಳನ್ನು ಕದ್ದಿಲ್ಲ. ತಲವಾರ ಹಾಗೂ ಬಂದೂಕು ಹಿಡಿದು ಬಲವಂತದ ಮತಾಂತರ ಮಾಡಿಲ್ಲ. ಬಂದೂಕು ಹಿಡಿದು ಪಾರ್ಲಿಮೆಂಟ್ ಮೇಲೆ ದಾಳಿ ಮಾಡಿದ ಅಥವಾ ಭಯೋತ್ಪಾದಕರಾದ ಉದಾಹರಣೆಯಿಲ್ಲ. ಬಡಮಕ್ಕಳ ಕೈಗೆ ಬಂದೂಕು ನೀಡಿ ಕಾಡಿಗೆ ಕಳಿಸಿ ರಕ್ತ ಹರಿಸಿಲ್ಲ ಎಂದು ಸಿದ್ಧರಾಮಯ್ಯಗೆ ಟಾಂಗ್ ನೀಡಿದ್ದಾರೆ.

ಬರೇ ಒಂದು ವರ್ಗದ ಕ್ರಿಮಿನಲ್ ಗಳ ಕೇಸ್ ಮುಕ್ತಗೊಳಿಸಿದ ನೀವು ನಮಗೆ ಕಾನೂನಿನ ಪಾಠ ಮಾಡುವ ಅಗತ್ಯವಿಲ್ಲ. ಡಿಜೆ ಹಳ್ಳಿ ಕೆಜೆ ಹಳ್ಳಿಯಲ್ಲಿ ದಲಿತ ಮುಖಂಡರ ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿ ಬೆಂಕಿ ಹಚ್ಚಿ ದಾಂಧಲೆ ಮಾಡಿದಾಗ ಏನಾಗಿತ್ತು ನಿಮ್ಮ ಬದ್ಧತೆಗೆ ಸಿದ್ದರಾಮಯ್ಯನವರೇ? ಎಂದು ಕೆ.ಜಿ ಬೋಪಯ್ಯ ಟೀಕಿಸಿದ್ದಾರೆ.

Key words: constitutional -lesson –bjp- MLA-KG Bopaiah- Tong -Siddaramaiah.

website developers in mysore