2004ರಿಂದ ಈವರೆಗಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಲಿ: ಮೊದಲು ಇವರೇ ಸಿಕ್ಕಿ ಬಿಳ್ತಾರೆ- ಯು.ಟಿ ಖಾದರ್.

ಮಂಗಳೂರ,ನವೆಂಬರ್,2,2022(www.justkannada.in):  ಸಿದ್ಧರಾಮಯ್ಯ ಅವಧಿಯಲ್ಲಿನ ಅಕ್ರಮದ ಬಗ್ಗೆ ದಾಖಲೆಗಳಿವೆ ಎಂದು ಹೇಳಿಕೆ ನೀಡಿದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ತಿರುಗೇಟು ನೀಡಿದ್ದಾರೆ.

ಮಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಯು.ಟಿ ಖಾದರ್,  ಎರಡು ವರ್ಷದಿಂದ ಕಟೀಲ್ ಇದೇ ಹೇಳಿಕೆ ನೀಡುತ್ತಾ ಬಂದಿದ್ದಾರೆ. 2004ರಿಂದ ಈವರೆಗೆ ಅಕ್ರಮಗಳ ಬಗ್ಗೆ ತನಿಖೆ ನಡೆಸಲಿ ತನಿಖೆ ಶುರುವಾದರೇ ಮೊದಲು ಇವರೇ ಸಿಕ್ಕೀ ಬೀಳುತ್ತಾರೆ. ಬರಿ ಬಾಯಿ ಮಾತಿನಲ್ಲಿ ಹೇಳುವುದಕ್ಕಿಂತ ಮಾಡಿ ತೋರಿಸಲಿ ತಮ್ಮ ವೈಪಲ್ಯಗಳನ್ನ ಮುಚ್ಚಿಕೊಳ್ಳಲು ಈ ರೀತಿ ಗೊಂದಲ ಸೃಷ್ಠಿಸುತ್ತಿದ್ದಾರೆ ಎಂದು ಕಿಡಿಕಾರಿದರು.

Key words: congress-MLA-  UT Khader-BJP-State president-nalin kumar katil