ಕಾಂಗ್ರೆಸ್ ಪಾದಯಾತ್ರೆ ಟೀಕಿಸುವ ಬದಲು ಮೇಕೆದಾಟು ಯೋಜನೆ ಅನುಷ್ಟಾನ ಮಾಡಲಿ- ಬಿ.ಕೆ ಹರಿಪ್ರಸಾದ್ ಆಗ್ರಹ

ಬೆಂಗಳೂರು,ಮಾರ್ಚ್,3,2022(www.justkannada.in):  ಕಾಂಗ್ರೆಸ್ ನ ಪಾದಯಾತ್ರೆ ಟೀಕಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಮೊದಲು ಮೇಕೆದಾಟು ಯೋಜನೆ ಅನುಷ್ಟಾನ ಮಾಡಿ ತೋರಿಸಲಿ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿ ಪ್ರಸಾದ್ ಸವಾಲು ಹಾಕಿದ್ದಾರೆ.

ಮಾಧ್ಯಮದ ಜತೆ ಇಂದು ಮಾತನಾಡಿದ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ರಾಜಕೀಯಕ್ಕಾಗಿ ನಾವು ಪಾದಯಾತ್ರೆ ಮಾಡುತ್ತಿಲ್ಲ  ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಯೋಜನೆ ಜಾರಿಯಾದರೆ ಬೆಂಗಳೂರು ಜನರ ಭವಣೆ ತೀರಲಿದೆ. ಕಾಂಗ್ರೆಸ್ ಪಾದಯಾತ್ರೆ ಟೀಕಿಸುವುದನ್ನ ಬಿಟ್ಟು ಮೇಕೆದಾಟು ಯೋಜನೆ ಅನುಷ್ಟಾನಕ್ಕೆ ತರಲಿ ರಾಜ್ಯ ಸರ್ಕಾರ ಮೇಕೆದಾಟು ಅನುಷ್ಟಾನ ಮಾಡಲಿ ಎಂದರು.

ಕೇಂಧ್ರ  ಬಿಜೆಪಿ ಸರ್ಕಾರ ಲಜ್ಜೆಗೆಟ್ಟ ಸರ್ಕಾರ. ಉಕ್ರೇನ್ ನಿಂದ ಭಾರತೀಯರನ್ನ ವಾಪಸ್ ಕರೆತರುವ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಬಿ.ಕೆ ಹರಿಪ್ರಸಾದ್ ಹರಿಹಾಯ್ದರು.

Key words: Congress –mekedatu- plan – BK Hariprasad