ಡಿಕೆ ಶಿವಕುಮಾರ್ ಗೆ ಜಾಮೀನು ಸಿಗುವ ವಿಶ್ವಾಸ: ಇಡಿ ವಿಚಾರಣೆಗೆ ಹಾಜರಾಗಲು ನಮ್ಮ ತಾಯಿ ಸಿದ್ಧ- ಸಂಸದ ಡಿ.ಕೆ ಸುರೇಶ್ ಹೇಳಿಕೆ…

ನವದೆಹಲಿ,ಅ,15,2019(www.justkannada.in):  ನವದೆಹಲಿ ಹೈಕೋರ್ಟ್ ನಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಇಡಿ ವಿಚಾರಣೆಗೆ ಹಾಜರಾಗಲು ನಮ್ಮ ತಾಯಿ ಗೌರಮ್ಮ ಸಿದ್ದರಿದ್ದಾರೆ ಎಂದು ಸಂಸದ ಡಿ.ಕೆ ಸುರೇಶ್ ತಿಳಿಸಿದರು.

ಇಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಇದಕ್ಕೂ ಮುನ್ನ ಮಾಧ್ಯಮಗಳಿಗೆ ಮಾತನಾಡಿದ ಸಂಸದ ಡಿ.ಕೆ ಸುರೇಶ್, ಜಾಮೀನು ಸಿಗುವ ವಿಶ್ವಾಸವಿದೆ.ನಾವು ಇಡಿಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದೇವೆ . ಆದರೂ ಸಹಕಾರ ನೀಡುತ್ತಿಲ್ಲ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಹೈಕೋರ್ಟ್ ನಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

ಡಿ.ಕೆ ಶಿವಕುಮಾರ್  ರಾಜಕಾರಣ ಅಂತ್ಯವಾಗಿಲ್ಲ ಹೊಸ ರೂಪದಲ್ಲಿ ಅವರು ರಾಜಕಾರಣಕ್ಕೆ ಬರ್ತಾರೆ. ಜನಸೇವೆಗೆ ಡಿ.ಕೆ ಶಿವಕುಮಾರ್ ಸದಾ ಸಿದ್ಧ ಎಂದು ಡಿ.ಕೆ ಸುರೇಶ್ ತಿಳಿಸಿದರು.

ಹಾಗೆಯೇ ಇಡಿ ವಿಚಾರಣೆಗೆ ತಾಯಿ ಗೌರಮ್ಮ ಹಾಜರು ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್, ಇಡಿ ಅಧಿಕಾರಿಗಳ ವಿಚಾರಣೆಗೆ ನಮ್ಮ ತಾಯಿ ಮತ್ತೊಮ್ಮೆ ವಿಚಾರಣೆಗೆ ಬರುತ್ತಾರೆ, ಇಡಿ ದಿನಾಂಕ ನಿಗದಿ ಪಡಿಸಿ, ಅಂದು ತಾಯಿ ಗೌರಮ್ಮ ಅವರ ಆರೋಗ್ಯ ಸರಿಯಿದ್ದರೆ, ಖಂಡಿತ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದರು.

Key words: Confidence – bail- mother -ready – attend- ED hearing – MP DK Suresh