ಕೇಂದ್ರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ಖಂಡನೆ: ಮೈಸೂರು ವಕೀಲರ ಸಂಘದಿಂದ  ದಿಢೀರ್ ಪ್ರತಿಭಟನೆ…

ಮೈಸೂರು,ಸೆ,19,2019(www.justkannada.in): ಕೇಂದ್ರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯನ್ನ ಖಂಡಿಸಿ  ಮೈಸೂರು ವಕೀಲರ ಸಂಘದ ವತಿಯಿಂದ ದಿಢೀರನೇ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಕೋರ್ಟ್  ಎದುರಿನ ಗಾಂಧಿ ಪ್ರತಿಮೆ ಬಳಿ ಮೈಸೂರು ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕೇಂದ್ರ‌ ಸರ್ಕಾರ ನೀತಿ ಖಂಡಿಸಿ ಪ್ರತಿಭಟನಾಕಾರರು ಕೇಂದ್ರದ ವಿರುದ್ದ ವಿವಿಧ ಘೋಷಣೆಗಳನ್ನ ಕೂಗಿ ಆಕ್ರೋಶ ಹೊರ ಹಾಕಿದರು.

ಕಲಾಪ ನಿಲ್ಲಿಸಿ ಬೀದಿಗಿಳಿದು  ಧರಣಿ ನಡೆಸಿದ ವಕೀಲರು ಕೂಡಲೇ ಈ ನೀತಿಯನ್ನ ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದರು.

Key words: Condemnation – amendment – Motor Vehicle Act-protests – Mysore Lawyers- Association