ಎಲ್ಲಾ ಸಮಸ್ಯೆ ಸರಿಪಡಿಸಿಕೊಂಡೇ ಕೋಲಾರಕ್ಕೆ ಸ್ಪರ್ಧೆಗೆ ಬನ್ನಿ-ಸಿದ್ಧರಾಮಯ್ಯಗೆ  ಕೆ.ಎಚ್ ಮುನಿಯಪ್ಪ ಸಲಹೆ.

ಕೋಲಾರ,ನವೆಂಬರ್,16,2022(www.justkannada.in):  ಕೋಲಾರದಲ್ಲಿ ಸ್ಪರ್ಧೆಸುವ  ಬಗ್ಗೆ ಸಿದ್ಧರಾಮಯ್ಯ ಸುಳಿವು ನೀಡಿದ್ದರು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ಧರಾಮಯ್ಯಗೆ ಕಾಂಗ್ರೆಸ್ ನಾಯಕ  ಕೆ.ಎಚ್ ಮುನಿಯಪ್ಪ ಮಹತ್ವದ ಸಲಹೆ ನೀಡಿದ್ದಾರೆ.

ಹೌದು,  ಕೋಲಾರದಲ್ಲಿ ಸಮಸ್ಯೆ ಇದೆ. ಎಲ್ಲಾ ಸಮಸ್ಯೆ ಸರಿಪಡಿಸಿಕೊಂಡೇ ಕೋಲಾರಕ್ಕೆ ಸ್ಪರ್ಧೆಗೆ ಬನ್ನಿ  ಎಂದು ಸಲಹೆ ನೀಡುತ್ತೇನೆ ಎಂದು ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಕೆಎಚ್ ಮುನಿಯಪ್ಪ, ಕೋಲಾರದಲ್ಲಿ ಸಮಸ್ಯೆ ಇದೆ. ಮೂಲ ಕಾಂಗ್ರೆಸ್ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ . ಎಲ್ಲಾ ಸಮಸ್ಯೆ ಸರಿಪಡಿಸಿಕೊಂಡು ಬಂದರೇ ಕೋಲಾರಕ್ಕೆ ಬಂದರೆ ಸ್ಪರ್ಧೆಗೆ ಅನುಕೂಲ. ಬಿಜೆಪಿ ಪರ ಇದ್ದವರನ್ನ ನಂಬಿದರೇ ಕೋಲಾರದಲ್ಲಿ ಗೆಲ್ಲಲ್ಲ.  ಸಮಸ್ಯೆ ಸರಿಪಡಿಸಿಕೊಂಡೇ ಬನ್ನಿ ಎಂದು ಸಲಹೆ  ನೀಡುತ್ತೇನೆ ಎಂದು ತಿಳಿಸಿದ್ದಾರೆ.

Key words: Come – Kolar – competition –after- solving – problems-KH Muniyappa -Siddaramaiah.