“ಸಿಡಿ ಪ್ರಕರಣ ಸಿಎಂ ಬಿ.ಎಸ್.ವೈ ಗಪ್ ಚುಪ್, ರಮೇಶ್ ಬಳಿಯಿದೆ ಯಡಿಯೂರಪ್ಪ ಸಿಡಿ” : ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಟೀಕೆ

kannada t-shirts

ಮೈಸೂರು,ಮಾರ್ಚ್,28,2021(www.justkannada.in) :  ಕಳೆದ 26 ದಿನಗಳಿಂದ ನಿರಂತರವಾಗಿ ನಾಟಕ್ ಕರ್ನಾಟಕ್ ನಡೀತಿದೆ. ರಮೇಶ್ ಜಾರಕಿಹೊಳಿ ಅವರು ಸರ್ಕಾರವನ್ನೇ ಉರುಳಿಸಿದ್ದೇನೆ, ಇದು ಯಾವ ಲೆಕ್ಕ ಎಂದಿದ್ದಾರೆ. ಇಷ್ಟೆಲ್ಲಾ ಆದರೂ ಯಡಿಯೂರಪ್ಪನವರು ಮಾತ್ರ ಗಪ್ ಚುಪ್. ಯಾಕಂದ್ರೆ ಯಡಿಯೂರಪ್ಪನವರ ಸಿಡಿ ಇವರ ಬಳಿ ಇದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದ್ದಾರೆ.

jk

ದಿನ ನಿತ್ಯ ಸಿನಿಮಾ ಓಡುತ್ತಿದೆ. ಹೀರೋ ಯಾರು? ಹೀರೋಹಿನ್ ಯಾರು?

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಎಂ.ಲಕ್ಷ್ಮಣ್ ಮಾತನಾಡಿ,  ದಿನ ನಿತ್ಯ ಸಿನಿಮಾ ಓಡುತ್ತಿದೆ. ಹೀರೋ ಯಾರು? ಹೀರೋಹಿನ್ ಯಾರು? ಅವರಿಬ್ಬರನ್ನು ಹೊರತುಪಡಿಸಿ ಸೈಡ್ ಆಕ್ಟರ್ ಗಳ ಕೂಡ ಗಮನ ಹರಿಸುತ್ತಿದ್ದಾರೆ ಎಂದು ಬಿಜಿಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪ ನೀವು ಹೆದರಿಕೊಳ್ಳಬೇಡಿ. ನಿಮ್ಮನ್ನ ರಕ್ಷಣೆ ಮಾಡುವ ಕೆಲಸ ನಾವು ಮಾಡುತ್ತೇವೆ

ರಕ್ಷಣೆ ನೀಡಿದರೆ ಸ್ವತಃ ನ್ಯಾಯಧೀಶರ ಮುಂದೆ ಬರುತ್ತೇನೆ ಎಂದು ಸ್ವತಃ ಯುವತಿಯೇ ಹೇಳುತ್ತಿದ್ದಾಳೆ. ಇಷ್ಟೆಲ್ಲಾ ಇದ್ದರೂ ಸಂತ್ರಸ್ತೆಯನ್ನೇ ವಿಲನ್ ರೀತಿ ಬಿಂಬಿಸುತ್ತಿದ್ದಾರೆ. ಯಡಿಯೂರಪ್ಪ ನೀವು ಹೆದರಿಕೊಳ್ಳಬೇಡಿ. ನಿಮ್ಮನ್ನ ರಕ್ಷಣೆ ಮಾಡುವ ಕೆಲಸ ನಾವು ಮಾಡುತ್ತೇವೆ. ನಿಮ್ಮ ಸಿಡಿ ಇದೆ ಎಂದು ಭಯಪಡಬೇಡಿ. ನಿಮ್ಮೊಂದಿಗೆ ನಾವಿರುತ್ತೇವೆ. ನಿಮಗೆ ಏನು ಆಗಲೂ ಬಿಡುವುದಿಲ್ಲ, ನಿಮ್ಮೊಂದಿಗೆ ನಾವಿದ್ದೇವೆ ಎಂದು ವ್ಯಂಗ್ಯ ಮಾಡಿದ್ದಾರೆ.

ಮಿಸ್ಟರ್ ಬಿ.ಎಲ್.ಸಂತೋಷ್ ವೇರ್ ಆರ್ ಯು?

ಮಿಸ್ಟರ್ ಬಿ.ಎಲ್.ಸಂತೋಷ್ ವೇರ್ ಆರ್ ಯು?, ಸಣ್ಣ ಪುಟ್ಟ ವಿಷಯಗಳ ಬಗ್ಗೆ ಟ್ವಿಟ್ ಮಾಡುವ ಸಂತೋಷ್ ಎಲ್ಲಿದ್ದೀರಿ? ಒಬ್ಬ ಯುವತಿಗೆ ಅನ್ಯಾಯವಾಗಿದ್ದರೂ, ಯಾಕೆ ಸುಮ್ಮನೆ ಕುಳಿತಿದ್ದೀರಿ? 376ಸಿ ರಮೇಶ್ ಜಾರಕಿಹೊಳಿ ಮೇಲೆ ಯಾಕೆ ಈ ಕೇಸ್ ಹಾಕುತ್ತಿದ್ದೀರಿ? ಈ ಸೆಕ್ಷನ್ ನಲ್ಲಿ ಹಾಕುವ ಹಾಗಿಲ್ಲ. ಪೊಲೀಸರು ನಿರ್ಭಯ ಆಕ್ಟ್ ಅನ್ನು ಒಮ್ಮೆ ಸರಿಯಾಗಿ ಓದಿಕೊಳ್ಳಿ. ರಾಜಾರೋಷವಾಗಿ ಜಾರಕಿಹೊಳಿ ಓಡಾಡುತ್ತಿದ್ದಾರೆ. ಪೊಲೀಸರು ಏನು ಮಾಡುತ್ತಿದ್ದೀರಿ?  ಯುವತಿ ಪ್ರಾಣಭಯದಿಂದ ಮನವಿ ಮಾಡಿಕೊಂಡಿದ್ದಾಳೆ. ಯುವತಿಯ ಪೋಷಕರು ಕಳೆದ 10ದಿನಗಳಿಂದ ಎಲ್ಲಿದ್ದರು? ಎಂದು ಕಿಡಿಕಾರಿದ್ದಾರೆ.

ನೀವು ಮಾಡಿರೋ ಹಲ್ಕಾ ಕೆಲಸ ಮುಚ್ಚಿಕೊಳ್ಳಲು ಜಾತಿ ತರ್ತಿದ್ದೀರಾ?

ನೀವು ಮಾಡಿರೋ ಹಲ್ಕಾ ಕೆಲಸ ಮುಚ್ಚಿಕೊಳ್ಳಲು ಜಾತಿ ತರ್ತಿದ್ದೀರಾ?, ಆ ಕೆಲಸ ಮಾಡುವಾಗ ಜಾತಿ ನೆನಪಾಗಿಲ್ಲ ಈಗ ಆಯ್ತಾ?, ಆ ಯುವತಿ ಪೋಷಕರಿಂದ ಜಾತಿ ಬಗ್ಗೆ ಹೇಳಿಕೆ ಕೊಡಿಸುತ್ತಿರಲ್ಲ‌ ನಾಚಿಕೆ ಆಗೋಲ್ವಾ?, ಜಾತಿ ಬಳಸಿಕೊಂಡು ಸಮಾಜದಲ್ಲಿ ಶಾಂತಿ ಭಂಗ ಮಾಡುತ್ತಿದ್ದೀರಾ? ಸರ್ಕಾರ ಇಂತವ ಬಹಿರಂಗ ಹೇಳಿಕೆಗಳನ್ನ ಏಕೆ ಸಹಿಸಿಕೊಳ್ಳುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದರು.

ಜಾರಕಿಹೊಳಿಯವರೆ ನಿಮಗೆ ಏನಾಗಿದೆ

ರಮೇಶ್ ಜಾರಕಿಹೊಳಿ ಕೇಸ್‌ನಲ್ಲಿ ಡಿಕೆಶಿ ಹೆಸರು ಪ್ರಸ್ತಾಪ ವಿಚಾರ ಕುರಿತು ಮಾತನಾಡಿ,  ಜಾರಕಿಹೊಳಿಯವರೆ ನಿಮಗೆ ಏನಾಗಿದೆ ಮೊದಲು ಹೇಳಿ. ನೀವೆ ಸಿಡಿಯನ್ನ ನಕಲಿ ಅಂತೀರಾ? ಡಿಕೆಶಿಯೇ ಇದನ್ನೆಲ್ಲ ಮಾಡಿಸಿದ್ದು ಅಂತೀರ? ಹಾಗಾದರೆ, ಸಿಡಿ ನಿಜ, ಅದರಲ್ಲಿರೋದು ನೀವೆ ಅಂತ ಒಪ್ಪಿಕೊಂಡಂತಾಯ್ತು ಎಂದು ಟೀಕಿಸಿದ್ದಾರೆ.

ಮೊದಲು ಆ ಯುವತಿ ಎಲ್ಲಿದ್ದಾಳೆ ಅಂತ ಹುಡುಕಿ ಜಾರಕಿಹೊಳಿ ಅವರನ್ನು ಬಂಧಿಸಿ

ಎಸ್‌ಐಟಿ ಅವರು ಜಾರಕಿಹೊಳಿ ಹಾಗೂ ಆ ಯುವತಿ ಇಬ್ಬರನ್ನು  ಬಿಟ್ಟಿದ್ದಾರೆ. ಆ ಕೇಸ್ ಸುತ್ತಮುತ್ತ ಇರೋ ಎಲ್ಲರನ್ನು ವಿಚಾರಣೆ ಮಾಡುತ್ತಿದ್ದಾರೆ. ಡಿಕೆಶಿ, ಪತ್ರಕರ್ತರು ಎಲ್ಲರನ್ನು ಬಿಡಿ. ಮೊದಲು ಆ ಯುವತಿ ಎಲ್ಲಿದ್ದಾಳೆ ಅಂತ ಹುಡುಕಿ ಜಾರಕಿಹೊಳಿ ಅವರನ್ನು ಬಂಧಿಸಿ ಎಂದು ಒತ್ತಾಯಿಸಿದ್ದಾರೆ.

CM-BSY-Gup Chup-CD case-Ramesh-Yeddyurappa CD-Congress-spokesperson-M.Laxman 

ಆ ಯುವತಿಯ ಪೋಷಕರನ್ನ ಗನ್‌ಪಾಯಿಂಟ್‌ನಲ್ಲಿ ಇಟ್ಟು ಹೇಳಿಕೆ‌

ಆ ಯುವತಿಯ ಪೋಷಕರನ್ನ ಗನ್‌ಪಾಯಿಂಟ್‌ನಲ್ಲಿ ಇಟ್ಟು ಹೇಳಿಕೆ‌ ಕೊಡಿಸಲಾಗಿದೆ. ಜಾರಕಿಹೊಳಿಯವರ ಭಾಷೆ ಅವರ ಸಂಸ್ಕೃತಿಯನ್ನ ತೋರಿಸುತ್ತದೆ. ನಾ ಗಂಡಸು ಗಂಡಸು ಅಂತ 6 ಬಾರಿ ಹೇಳಿದ್ದೀರಿ. ಹೌದಪ್ಪ ನೀನು ಗಂಡಸು ಅಂತ ನಿನ್ನ ಸಿಡಿಯಲ್ಲೆ ಗೊತ್ತಾಗಿದೆ. ಅದನ್ನ ಯಾಕೇ ಪದೆ, ಪದೆ ಹೇಳುತ್ತೀಯ. ಹಾಗಂತ ನಮ್ಮ ಅಧ್ಯಕ್ಷರ ಮೇಲೆ ನಾಲಿಗೆ ಹರಿಬಿಟ್ಟು ಮಾತನಾಡೋದು ಏಕೆ?, ಡಿಕೆಶಿ ಅವರ ಪಾತ್ರ ಇದ್ದರೆ ಅಧಿಕಾರಿಗಳು ತನಿಖೆ ಮಾಡುತ್ತಾರೆ. ನೀನು ಯಾವಾಗಲೂ ಚಾಲೇಂಜ್ ಮಾಡ್ತಿಯಲ್ಲ ಬಂದು ಕನಕಪುರದಲ್ಲಿ ಚುನಾವಣೆಗೆ ನಿಲ್ಲು. ಅದು ಬಿಟ್ಟು ಬಾಯಿಗೆ ಬಂದಂತೆ ಮಾತನಾಡೋದು ಏಕೆ? ಎಂದು ವಾಗ್ದಾಳಿ ನಡೆಸಿದರು.

key words : CM-BSY-Gup Chup-CD case-Ramesh-Yeddyurappa CD-Congress-spokesperson-M.Laxman

website developers in mysore