ಕುತೂಹಲ ಕೆರಳಿಸಿದ ರಾಜಭವನಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ಭೇಟಿ…

ಬೆಂಗಳೂರು,ಜು,31,2020(www.justkannada.in):  ರಾಜ್ಯದಲ್ಲಿ ಕೊರೋನಾ ಮಹಾಮಾರಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು ವಿಧಾನ ಪರಿಷತ್ ಗೆ  ನಾಮ ನಿರ್ದೇಶನ ಮಾಡಿದ ಬಳಿಕ  ಸಚಿವ ಸಂಪುಟ ವಿಸ್ತರಣೆ ಹಾಗೂ ಪುನರಚನೆ ಚರ್ಚೆ ಆರಂಭವಾವಾಗಿದೆ. jk-logo-justkannada-logo

ಈ ಮಧ್ಯೆ ಬಿಜೆಪಿ ಸರ್ಕಾರದ ಸಂಪುಟ ಸೇರ್ಪಡೆಯಾಗಲು ಬಿಜೆಪಿಯಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದು ಲಾಬಿ ನಡೆಸಲು ಸಜ್ಜಾಗಿದ್ದಾರೆ. ಈ ನಡುವೆ ಸಿಎಂ ಬಿಎಸ್ ಯಡಿಯೂರಪ್ಪ ಇಂದು ರಾಜಭವನಕ್ಕೆ ಭೇಟಿ  ನೀಡಿ ರಾಜ್ಯಪಾಲರ ಜತೆ ಚರ್ಚಿಸುತ್ತಿದ್ದಾರೆ. ರಾಜಭವನಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಕುತೂಹಲ ಮೂಡಿಸಿದೆ.cm-bs-yeddyurappa-meet-governor-rajbhavan

ಸಿಎಂ ಬಿಎಸ್ ಯಡಿಯೂರಪ್ಪಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಾಥ್ ನೀಡಿದ್ದು ರಾಜ್ಯಪಾಲರ ಬಳಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸುತ್ತಿರುವ ಸಾಧ್ಯತೆ ಇದೆ.

Key words: cm BS Yeddyurappa- meet- Governor-rajbhavan