ಸಿಎಂ ಬಿ.ಎಸ್.ವೈ ಹೇಳಿಕೆ ದೌರ್ಜನ್ಯದ ಪರಮಾವಧಿ : ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು,ಏಪ್ರಿಲ್,13,2021(www.justkananda.in) : ಒಂದು ತಿಂಗಳು ಪ್ರತಿಭಟನೆ ನಡೆಸಿದರೂ ಸರ್ಕಾರ ಸಾರಿಗೆ ನೌಕರರ ಮುಷ್ಕರಕ್ಕೆ ಬಗ್ಗಲ್ಲ, ಸಂಬಳ ಕೊಡುವುದೂ ಇಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿರುವುದು ದೌರ್ಜನ್ಯದ ಪರಮಾವಧಿ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ.CM,B.S.Y,Statement,atrocious,Extreme,Kodihalli Chandrasekharಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಈ ರೀತಿ ಹೇಳಿಕೆ ಸರಿಯಲ್ಲ. ದಂಡಿಸುವ ದಿಕ್ಕಿನಡಿ ಸರ್ಕಾರ ಮುಂದಾಗಬಾರದು. ಸಿಎಂ ಯಡಿಯೂರಪ್ಪನವರು ಮೊಂಡುತನ ಮಾಡುವುದನ್ನು ಬಿಟ್ಟು ಸಾರಿಗೆ ನೌಕರರ ಬೇಡಿಕೆ ಬಗ್ಗೆ ಇನ್ನೊಮ್ಮೆ ಪರಿಶೀಲನೆ ನಡೆಸಲಿ ಎಂದು ಆಗ್ರಹಿಸಿದರು.

CM-B.S.Y-Statement-atrocious-Extreme-Kodihalli Chandrasekhar 

ಸಾರಿಗೆ ನೌಕರರ ಸಂಕಷ್ಟವನ್ನು ಆಲಿಸದೇ, ಖಾಸಗಿ ವಾಹನ ಚಾಲಕರನ್ನು ತಂದು ಬಸ್ ಓಡಿಸುತ್ತಿರುವ ಸರ್ಕಾರದ ಕ್ರಮ ಖಂಡನೀಯ. ಸರ್ಕಾರದ ಈ ನಡೆ ಯಶಸ್ವಿಯಾಗಲ್ಲ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

key words : CM-B.S.Y-Statement-atrocious-Extreme-Kodihalli Chandrasekhar