ಚಿಕ್ಕಮಗಳೂರು: ಅಂಬುಲೆನ್ಸ್ ದುರುಪಯೋಗ ಪಡಿಸಿಕೊಂಡು‌ ಸಿಕ್ಕಿಬಿದ್ದ ಚಾಲಕ

ಚಿಕ್ಕಮಗಳೂರು, ಏಪ್ರಿಲ್ 13, 2020 (www.justkannada.in): ಲಾಕ್ ಡೌನ್ ಹಿನ್ನಲೆ‌ ಅಂಬುಲೆನ್ಸ್ ದುರುಪಯೋಗ ಮಾಡಿಕೊಂಡಿರುವ ಘಟನೆ ನಡೆದಿದೆ.

ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬರಲು 28 ಸಾವಿರ ಪಡೆದ ಅಂಬುಲೆನ್ಸ್ ಮಾಲೀಕ. ಅಂಬುಲೆನ್ಸ್ ಗಳನ್ನೆ ಬಳಸಿಕೊಂಡು ಹಣ ಮಾಡುತ್ತಿರುವ ಖತರ್ನಾಕ್ ಗಳು.

ಅಂಬುಲೆನ್ಸ್ ನಲ್ಲಿ‌ ಪ್ರಯಾಣಿಕರನ್ನು ಕರೆತಂದು ಸಿಕ್ಕಿಬಿದ್ದ ಚಾಲಕ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಚಕ್ ಪೋಸ್ಟ್ ನಲ್ಲಿ ಸಿಕ್ಕಿಬಿದ್ದ ಅಂಬುಲೆನ್ಸ್

ಬೆಂಗಳೂರಿನಿಂದ ಲಿಂಗದಹಳ್ಳಿ ಸಮೀಪದ ಹೊಸ ಗಂಗೂರಿಗೆ 5 ಜನರನ್ನು ಕರೆತಂದ ಅಂಬುಲೆನ್ಸ್. ಕೆ ಎ 53. 3894 ಅಂಬುಲೆನ್ಸ್ ವಾಹನ ವಶಪಡಿಸಿಕೊಂಡ ಪೊಲೀಸರು. ಅಂಬುಲೆನ್ಸ್ ಅನ್ನು ವಶಪಡಿಸಿಕೊಂಡ ಪೊಲೀಸರು.

ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು