ಹುಣಸೂರು ತಾಲೂಕಲ್ಲಿ ಹಾಡಹಗಲೇ ಚಿರತೆ ದಾಳಿ

kannada t-shirts

ಬೆಂಗಳೂರು, ಜೂ.7, 2020 (www.justkannada.in): ಹುಣಸೂರಿನ ತಾಲೂಕಿನ ಹನಗೋಡು ಸಮೀಪದ ದಾಸನಪುರ ಗ್ರಾಮದಲ್ಲಿ ಹಾಡುಹಗಲೇ ಚಿರತೆ ದಾಳಿ ನಡೆದಿದೆ.

ಇದರಲ್ಲಿ ಒಂದು ಕುರಿ ಸಾವು, 2 ಕುರಿ ನಾಪತ್ತೆಯಾಗಿದೆ.

ಹುಣಸೂರಿನ ತಾಲೂಕಿನ ಹನಗೋಡು ಸಮೀಪದ ದಾಸನಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ದಾಸನಪುರ ಗ್ರಾಮದ ರಾಣಿ ಶೇಖರ್ ರವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಭಾನುವಾರ ಮುಂಜಾನೆ ಶೇಖರ್ ತಮ್ಮ ಜೋಳದ ಜಮೀನಿಗೆ ಉಳುಮೆ ಮಾಡುತ್ತಿದ್ದುಕುರಿಗಳನ್ನು ಮೇಯಲು ಬಿಟ್ಟಿದ್ದರು.

ಭಾನುವಾರ 8:00 ಸಮಯದಲ್ಲಿ ಚಿರತೆಯೊಂದು ದಾಳಿ ನಡೆಸಿ ಒಂದು ಕುರಿಯನ್ನು ಅಲ್ಲೇ ಸಾಯಿಸಿದೆ ಮತ್ತೆರಡು ಕುರಿಗಳು ಕಾಣೆಯಾಗಿವೆ. ಸ್ಥಳಕ್ಕೆ ವೀರನಹೊಸಳ್ಳಿ ವಲಯದ ಡಿ ಆರ್ ಎಫ್ ದ್ವಾರಕನಾಥ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದಾರೆ.

website developers in mysore