ರಾಜಕೀಯ ದುರುದ್ಧೇಶದಿಂದ ಚಾರ್ಜ್ ಶೀಟ್: ಇದು ಐಟಿ ಇಲಾಖೆಯಿಂದ ಹೊಸ ಸೃಷ್ಠಿ  – ಡಿ.ಕೆ ಶಿವಕುಮಾರ್

ಬೆಂಗಳೂರು,ಮೇ, 26,2022(www.justkannada.in): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಇಡಿ ಅಧಿಕಾರಿಗಳು ಹೊಸದಾಗಿ ಚಾರ್ಜ್ ಶೀಟ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್, ರಾಜಕೀಯ ದುರುದ್ಧೇಶದಿಂದ ಚಾರ್ಜ್ ಶೀಟ್ ಹಾಕಲಾಗಿದೆ.  ಇದು ಇಡಿ ಅಧಿಕಾರಿಗಳು ಹೊಸದಾಗಿ ಸೃಷ್ಠಿಸಿದ್ದಲ್ಲ. ಐಟಿ ಇಲಾಖೆಯಿಂದ ಹೊಸ ಸೃಷ್ಠಿಯಾಗಿದೆ. ನಮಗೆ ಇನ್ನೂ ಚಾರ್ಜ್ ಶೀಟ್ ಪ್ರತಿ ಸಿಕ್ಕಿಲ್ಲ.  ಕೋರ್ಟ್ ನಿಂದ ಪ್ರತಿ ಪಡೆದು ಪರಿಶೀಲಿಸಿ  ಮುಂದುವರೆಯುವೆ ಎಂದರು.

ಗುಜರಾತ್ ನಲ್ಲಿ ಅಹ್ಮದ್ ಪಟೇಲ್ ಗೆ ಸಹಕಾರ ನೀಡಿದ್ದಕ್ಕೆ  ಐಟಿ ದಾಳಿ ನಡೆಸಿದ್ದರು.  ಅಲ್ಲಿಂದ ಶುರುವಾಗಿ ಈಗ ತನಿಖೆ ಜಾರ್ಚ್ ಶೀಟ್ ವರೆಗೆ ಮುಂದುವರೆದಿದೆ.  ಕಾನೂನಿನ ಮೇಲೆ ನಂಬಿಕೆ ಇದೆ ನಾನೇನು ತಪ್ಪು ಮಾಡಿಲ್ಲ ಅಂತಾ ಗೊತ್ತಿದೆ. ಬಿಜೆಪಿ ಜತೆ ಹೋಗಬೇಕು ಇಲ್ಲ ಶರಣಾಗಬೇಕು. ಬಿಜೆಪಿಗೆ ಯಾರಿಂದ ತೊಂದರೆ ಇದೆ ಅಂಥವರನ್ನ ನಿರ್ನಾಮ ಮಾಡಲು ಮುಂದಾಗಿದ್ದಾರೆ. ಆದರೆ ಅದನ್ನ ನಾನು ಫೇಸ್ ಮಾಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: Charge sheet -political -IT department-DK Shivakumar