ಚಾಮರಾಜನಗರ ಆಕ್ಸಿಜನ್ ದುರಂತ: ಮೈಸೂರು ಜಿಲ್ಲಾಧಿಕಾರಿಗೆ ಕ್ಲೀನ್ ಚಿಟ್…

kannada t-shirts

ಬೆಂಗಳೂರು,ಮೇ,13,2021(www.justkannada.in):  ಚಾಮರಾಜ ನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕ್ಲೀನ್ ಚೀಟ್  ನೀಡಲಾಗಿದೆ.jk

ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂದಿಸಿದ್ದಂತೆ ತನಿಖೆ ನಡೆಸಲು ಹೈಕೋರ್ಟ್ ಸದಸ್ಯರ ಸಮಿತಿ ನೇಮಿಸಿತ್ತು. ಚಾಮರಾಜ ನಗರಕ್ಕೆ ಆಮ್ಲಜನಕ ಸಾಗಿಸಲು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಡೆ ಒಡ್ಡಿದ್ದಾರೆ ಎಂಬ ಆರೋಪ ಹೊತ್ತಿದ್ದದ್ದರು.Chamarajanagar -Oxygen –Disaster- Clean chit - mysore-DC-Rohini sinduri

ಪ್ರಕರಣ ಸಂಬಂಧ ಇದೀಗ ತನಿಖಾ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ರೋಹಿಣಿ ಸಿಂಧೂರಿ ಆಮ್ಲಜನಕ ಪೂರೈಕೆಗೆ ತಡೆಯೊಡಿದ್ದಾರೆ ಎಂಬುದಕ್ಲೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ರೋಹಿಣಿ ಸಿಂಧೂರಿ ಅವರ ವಿರುದ್ಧ ಆರೋಪಕ್ಕೆ ಚಾಮರಾಜ ನಗರ ಜಿಲ್ಲಾಧಿಕಾರಿ ಬಳಿ ಯಾವುದೇ ದಾಖಲೆ  ಇಲ್ಲ. ಹಾಗಾಗಿ ಆಮ್ಲಜನಕ ಪೂರೈಕೆಕೆ ತಡೆಯೊಡ್ಡಿದ್ದಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ತನಿಖಾ ತಂಡ ವರದಿಯಲ್ಲಿ ತಿಳಿಸಿದೆ. ವರದಿ ಬಳಿಕ ಡಿಸಿ ರೋಹಿಣಿ ಸಿಂಧೂರಿ ದೋಷಮುಕ್ತರಾಗಿದ್ದಾರೆ.

Key words: Chamarajanagar -Oxygen –Disaster- Clean chit – mysore-DC-Rohini sinduri

website developers in mysore