ವಿಂಗ್ ಕಮಾಂಡರ್ ಅಭಿನಂದನ್ ಬಯೋಪಿಕ್’ನಲ್ಲಿ ಚಾಲೆಂಜಿಂಗ್ ಸ್ಟಾರ್?! ನಿರ್ಮಾಪಕ ಮುನಿರತ್ನ ಘೋಷಣೆ

ಬೆಂಗಳೂರು, ಫೆಬ್ರವರಿ 24, 2020 (www.justkannada.in): ನಿರ್ಮಾಪಕ ಮುನಿರತ್ನ ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದು, ಈ ಬಾರಿ ವಿಂಗ್ ಕಮಾಂಡರ್ ಅಭಿನಂದನ್ ಅವರ ಜೀವನಕಥೆಯಾಧಾರಿತ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.

ವಿಂಗ್ ಕಮಾಂಡರ್ ಅಭಿನಂದನ್ ಪಾತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಣ್ಣ ಹಚ್ಚಬೇಕೆಂಬುದು ನನ್ನಾಸೆ. ದರ್ಶನ್ ಅವರನ್ನು ವಿಂಗ್ ಕಮಾಂಡರ್ ಆಗಿ ತೆರೆಮೇಲೆ ತರಲಿದ್ದೇನೆ ಎಂದು ಮುನಿರತ್ನ ಘೋಷಿಸಿದ್ದಾರೆ. ಅಲ್ಲದೇ ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಗೂ ಕೂಡ ಒಂದು ಪಾತ್ರ ಕೊಡುವುದಾಗಿ ಹೇಳಿದ್ದಾರೆ.

ಆದರೆ ದರ್ಶನ್ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಒಟ್ಟಾರೆ ವೀರಯೋಧ ವಿಂಗ್ ಕಮಾಂಡರ್ ಅಭಿನಂದನ್ ಪಾತ್ರದಲ್ಲಿ ತೆರೆಮೇಲೆ ಬರಲು ದರ್ಶನ್ ಸಜ್ಜಾಗುತ್ತಿದ್ದಾರೇ ಎಂಬುದನ್ನು ಕಾದುನೋಡಬೇಕು.

ಕುರುಕ್ಷೆತ್ರ ಚಿತ್ರ 100 ದಿನಗಳ ಪ್ರದರ್ಶನ ಕಂಡ ಹಿನ್ನಲೆಯಲ್ಲಿ ಶತದಿನೋತ್ಸವವನ್ನು ಸಂಭ್ರಮಿಸಲು ಆಯೋಜಿಸಿದ್ದ ಸಮಾರಂಭದಲ್ಲಿ ಮುನಿರತ್ನ ಈ ವಿಷಯ ಘೋಷಿಸಿದ್ದಾರೆ.