ನೆರೆ ಪರಿಹಾರದ ಬಗ್ಗೆ ಕೇಂದ್ರದ ವಿರುದ್ಧ ಆರೋಪ: ಅಂಕಿ ಅಂಶಗಳ ಬಿಡುಗಡೆ ಮಾಡಿ ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಬಿಜೆಪಿ….

kannada t-shirts

ಬೆಂಗಳೂರು,ಅಕ್ಟೋಬರ್,22,2020(www.justkannada.in):  ರಾಜ್ಯದಲ್ಲಿ ನೆರೆ ಪರಿಸ್ಥಿತಿ ಉಂಟಾಗಿ ಜನ ಸಂಕಷ್ಟದಲ್ಲಿದ್ದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರೆ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಪದೇ ಪದೇ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಅಂಕಿ ಅಂಶಗಳನ್ನ ಬಿಡುಗಡೆ ಮಾಡುವ ಮೂಲಕ ಬಿಜೆಪಿ ಟಾಂಗ್ ನೀಡಿದೆ.jk-logo-justkannada-logo

ನೆರೆ ಪರಿಹಾರ ಕುರಿತು ಇಂದು ಕಂದಾಯ ಸಚಿವ ಆರ್.ಅಶೋಕ್ ಅಂಕಿ ಅಂಶಗಳನ್ನ ಬಿಡುಗಡೆ ಮಾಡಿದರು. 2008 ರಿಂದ 2014ರ ಯುಪಿಎ ಸರ್ಕಾರದ ಅನುದಾನ ಎಸ್ ಡಿಆರ್ ಎಫ್ ನಿಂದ 724 ಕೋಟಿ ರೂ, ಎನ್ ಡಿಆರ್ ಎಫ್ 2,669 ಕೋಟಿ ಬಿಡುಗಡೆ ಮಾಡಿದೆ.center-allegations-congress-bjp-releasing-statistics-flood-relief

ಹಾಗೆಯೇ ಪ್ರಧಾನಿ ಮೋದಿ ನೇತೃತ್ವದ  ಎನ್ ಡಿಎ ಸರ್ಕಾರದ ಅವಧಿಯಲ್ಲಿ ಎಸ್.ಡಿ ಆರ್ ಎಫ್ 1332 ಕೋಟಿ ರೂ. ಎನ್ ಡಿಆರ್ ಎಫ್ 9279 ಕೋಟಿ ರೂ. ನೀಡಿದೆ ಎಂದು ಅಂಕಿ ಅಂಶ ರಿಲೀಸ್ ಮಾಡಿ ಸಚಿವ ಆರ್.ಅಶೋಕ್ ತಿಳಿಸಿದರು. ಈ ಮೂಲಕ ಕೇಂದ್ರ ಸರ್ಕಾರ ನೆರೆ ಪರಿಹಾರ ನೀಡುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಉತ್ತರ ನೀಡಿದ್ದಾರೆ.

ವಿಪಕ್ಷ ನಾಯಕರಿಗೆ ಕಾಮಾಲೆ ಕಣ್ಣು, ಜಾಣಕುರುಡು.  ವಿರೋಧ ಮಾಡಲೆಂದೇ ವಿರೋಧ ಮಾಡುತ್ತಿದ್ದಾರೆ ಅಷ್ಟೆ ಎಂದು ಸಚಿವ ಆರ್.ಅಶೋಕ್ ಕಿಡಿಕಾರಿದರು.

Key words: Center – allegations-congress- BJP -releasing –statistics-flood relief

website developers in mysore