ರಮೇಶ್ ಜಾರಕಿಹೊಳಿ-ಡಿಕೆಶಿ ನಡುವೆ ಸಿಡಿ ಫೈಟ್: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್.

kannada t-shirts

ಬೆಂಗಳೂರು, ಫೆಬ್ರವರಿ,2,2023(www.justkannada.in): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವಿನ ಸಿಡಿ ಫೈಟ್ ವಿಚಾರಕ್ಕೆ ಸಂಬಂಧಿಸಿದಂತೆ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನಮಗೆ ಬೇಕಾಗಿರೋದು ನಮ್ಮ ನಾಡಿನ ಜನರ ಬದುಕು. ರೈತರು ಯುವಕರ ಸಮಸ್ಯೆ ಹೇಗೆ ಬಗೆಹರಿಸಬೇಕೆಂಬುದು ನನ್ನ ಚಿಂತೆ. ಅದರೆ ಇವರೆಲ್ಲಾ ಸಿಡಿ ವಿಚಾರ ಇಟ್ಟುಕೊಂಡು ಹೊರಟಿದ್ದಾರೆ. ನಾನು ಜನರ ಪರ ಧ್ವನಿ ಎತ್ತಿ ಹೋರಾಟ ಮಾಡುತ್ತೇನೆ. ಈ ಸಮಯದಲ್ಲಿ ಇದು ಸರಿನಾ ಅನ್ನೋದು ಜನರೇ ತೀರ್ಮಾನ ಮಾಡಲಿ ಎಂದರು.

Key words: CD -fight – Ramesh Jarakiholi-DK Shivakumar- Former CM- HD Kumaraswamy

website developers in mysore