ಸಿಬಿಐ ದಾಳಿ: ಈ ರೀತಿ ಬೆದರಿಕೆಯಿಂದ ಡಿ.ಕೆ ಶಿವಕುಮಾರ್ ಗೆ ಏನು ಆಗಲ್ಲ-ಸಂಸದ ಡಿ.ಕೆ ಸುರೇಶ್…

ಬೆಂಗಳೂರು,ಅಕ್ಟೋಬರ್,5,2020(www.justkannada.in): ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿವಾಸದ ಮೇಲಿನ ಸಿಬಿಐ ದಾಳಿ ಸಂಬಂಧ ಈ ರೀತಿಯ ಬೆದರಿಕೆಯಿಂದ ಡಿ.ಕೆ ಶಿವಕುಮಾರ್ ಗೆ ಏನು ಆಗಲ್ಲ ಎಂದು ಸಂಸದ ಡಿ.ಕೆ ಸುರೇಶ್ ತಿಳಿಸಿದ್ದಾರೆ.jk-logo-justkannada-logo

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಂಸದ ಡಿ.ಕೆ ಸುರೇಶ್, ಕಾಂಗ್ರೆಸ್ ಪಕ್ಷವನ್ನು ಹತ್ತಿಕ್ಕಲು ಈ ರೀತಿ ದಾಳಿಯಾಗಿದೆ. ಇದು ರಾಜಕೀಯ ಪ್ರೇರಿತ ದಾಳಿ.  ಬೆದರಿಕೆ ಏನಿದ್ರೂ ಹೆದರಿ ಓಡಿ ಹೋಗುವವರಿಗೆ. ಅವರ ಬೆದರಿಕೆಗೆ ನಾವು ಹೆದರುವುದಿಲ್ಲ. ಇದರಿಂದ ಈ ರೀತಿ ಬೆದರಿಕೆಯಿಂದ ಡಿ.ಕೆ ಶಿವಕುಮಾರ್ ಗೆ ಏನು ಆಗಲ್ಲ ಎಂದರು.cbi-attacks-dk-sivakumar-threatened-mp-dk-suresh

ಹಾಗೆಯೇ ಪಕ್ಷಕ್ಕೆ ಕಾರ್ಯಕರ್ತರಿಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇವೆ.  ಚುನಾವಣಾ ಪ್ರಚಾರಕ್ಕೆ ಹೋಗದಂತೆ ತಡೆಯುವ ಪ್ರಯತ್ನ ಇದು. ಆದರೆ ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡುವ ಪ್ರಶ್ನೆಯೇ ಇಲ್ಲ ಎಂದು ಡಿ.ಕೆ ಸುರೇಶ್ ತಿಳಿಸಿದರು.

Key words: CBI attacks-DK Sivakumar – threatened -, MP- DK Suresh