ತೆಲಂಗಾಣ ಸಿಎಂ ಮನೆ ನಾಯಿ ಸತ್ತಿದ್ದಕ್ಕೆಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ಕೇಸ್ ! ಸೋಷಿಯಲ್ ಮೀಡಿಯಾದಲ್ಲಿ ಟೀಕೆ

ಹೈದರಾಬಾದ್, ಸೆಪ್ಟೆಂಬರ್ 15, 2019 (www.justkannada.in): ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಮನೆಯ ನಾಯಿ ಸತ್ತಿದ್ದಕ್ಕೆ ಚಿಕಿತ್ಸೆ ನೀಡಿದ ಪಶುವೈದ್ಯನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ಅಪರಾಧಾತ್ಮಕ ನಿರ್ಲಕ್ಷ್ಯ ವಹಿಸಿದ ಆರೋಪ ಹೊರಿಸಿ ಪಶು ವೈದ್ಯನ ವಿರುದ್ಧ ಪ್ರಕರಣ ದಾಖಲಿಸಿರುವ ಸಿಎಂ ಚಂದ್ರಶೇಖರ ರಾವ್ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದೆ.

ಪಶು ವೈದ್ಯ ಚುಚ್ಚುಮದ್ದು ನೀಡಿದ ಬಳಿಕ ಹನ್ನೊಂದು ತಿಂಗಳ ನಾಯಿಮರಿ ಮೃತಪಟ್ಟಿದೆ ಎಂದು ಮುಖ್ಯಮಂತ್ರಿ ನಿವಾಸದಲ್ಲಿ ಸಾಕು ನಾಯಿಗಳ ಹೊಣೆ ಹೊತ್ತಿರುವ ಆಸೀಫ್ ಅಲಿ ಖಾನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.