ಮೈಸೂರಿನಲ್ಲಿ ಬಿವೈ ವಿಜಯೇಂದ್ರ ವರ್ಸಸ್ ವಿ. ಸೋಮಣ್ಣ..? ಗೊಂದಲ ಗೂಡಾದ ಚುನಾವಣಾ ಪ್ರಚಾರ ಸಭೆ.

ಮೈಸೂರು,ಜೂನ್,7,2022(www.justkannada.in): ದಕ್ಷಿಣ ಪದವೀಧರ ಚುನಾವಣೆಯ ಬಿಜೆಪಿ ಪ್ರಚಾರ ಸಭೆಯಲ್ಲಿ ಗೊಂದಲ ಉಂಟಾಗಿದ್ದು, ಹಣ ಬರಹ ಇದ್ರೆ ವಿಜಯೇಂದ್ರ ಮುಖ್ಯಮಂತ್ರಿ ಆಗ್ತಾನೆ ಎಂದ ಸಚಿವ ಸೋಮಣ್ಣ ಮಾತಿಗೆ  ಬಿವೈ ವಿಜಯೇಂದ್ರ ಬೆಂಬಲಿಗರು ಸಿಡಿಮಿಡಿಕೊಂಡು ವಾಗ್ವಾದಕ್ಕಿಳಿದರು. ಈ ವೇಳೆ ಕಾರ್ಯಕರ್ತರನ್ನ ಸಮಾಧಾನಪಡಿಸಲು ಸಂಸದ ಪ್ರತಾಪ್ ಸಿಂಹ ಮುಂದಾದ ಘಟನೆ ನಡೆಯಿತು.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಸಚಿವ ವಿ.ಸೋಮಣ್ಣ ಭಾಷಣ ಮಾಡಲು ಮುಂದಾದ ವೇಳೆ ವಿಜಯೇಂದ್ರ ಪರ ಬೆಂಬಲಿಗರು ಘೋಷಣೆ ಕೂಗಿ ಕಿರಿಕಿರಿಯನ್ನುಂಟು ಮಾಡಿದರು. ಈ ವೇಳೆ ಕಾರ್ಯಕರ್ತರ ಮೇಲೆ ಸಿಟ್ಟಾದ ಸಚಿವ ಸೋಮಣ್ಣ, ಯಾರನ್ನು ಸಣ್ಣವರನ್ನಾಗಿ ಮಾಡಬೇಡಿ. ವಿಜಯೇಂದ್ರ ಹಣ ಬರಹ ಇದ್ರೆ ಅವನು ಮುಖ್ಯಮಂತ್ರಿ ಆಗ್ತಾನೆ ಎಂದರು.

ಈ ವೇಳೆ ಸೋಮಣ್ಣ ಮಾತಿಗೆ ಸಿಡಿಮಿಡಿಗೊಂಡ ವಿಜಯೇಂದ್ರ ಬೆಂಬಲಿಗರು, ಯಡಿಯೂರಪ್ಪ ನಿಂದ ಅವರು ಮಂತ್ರಿ ಆಗಿರುದು ಎಂದು ತಿರುಗೇಟು ನೀಡಿದರು. ಅಭಿಮಾನಿಗಳನ್ನು ಸಮಾದಾನ ಪಡಿಸಲು ಬಂದ ಸಂಸದ ಪ್ರತಾಪ್ ಸಿಂಹ ಜತೆಯೂ  ವಿಜಯೇಂದ್ರ ಅಭಿಮಾನಿಗಳು ವಾಗ್ವಾದ ಇಳಿದ ಘಟನೆ ನಡೆಯಿತು.

ಕಾರ್ಯಕರ್ತರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವ ವಿ.ಸೋಮಣ್ಣ, ವಿಜಯೇಂದ್ರನಿಗೆ ಅದೃಷ್ಟ ಇದ್ದರೆ ಅವನೂ ಉನ್ನತ ಸ್ಥಾನಕ್ಕೆ ಹೋಗುತ್ತಾನೆ.ಸುಮ್ಮನೆ ವಿಜಯೇಂದ್ರನಿಗೆ ರೈಲು ಹತ್ತಿಸಿ ಹಾಳು ಮಾಡಬೇಡಿ. ವಿಜಯೇಂದ್ರ ಮುಂದೆ ಯಾರನ್ನು ಚಿಕ್ಕವರಾಗಿ ಮಾಡಬೇಡಿ.  ವಿಜಯೇಂದ್ರನಾ ಹರಕೆಯ ಕುರಿ ಮಾಡಬೇಡಿ. ಘೋಷಣೆ ಕೂಗಿ ಕೂಗಿ ಹರಕೆಯ ಕುರಿ ಮಾಡಬೇಡಿ. ನಾನು ಐದಾರು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಗೌರವ ಕೊಡವುದನ್ನು ಕಲಿಯಿರಿ  ಎಂದು ಕಿಡಿಕಾರಿದರು.

ಈ ವೇಳೆ ಸೋಮಣ್ಣ ಮಾತಿಗೆ ವಿಜಯೇಂದ್ರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಅಭಿಮಾನಿಗಳ ವಿಜಯೇಂದ್ರ. ಸಮಾಧಾನಪಡಿಸಿದರು.

ಮಾತು ಮುಂದುವರೆಸಿದ ಸಚಿವ ವಿ.ಸೋಮಣ್ಣ, ನಾನು ಬೆಂಗಳೂರಿನಲ್ಲಿ ಸ್ವತಂತ್ರವಾಗಿಯೂ ಗೆದ್ದಿದ್ದೇನೆ. ಕೆಂಪೇಗೌಡರ ಬೆಂಗಳೂರಿನಲ್ಲಿ ಈ ಸೋಮಣ್ಣ ಐದು ಬಾರಿ ಶಾಸಕನಾಗಿದ್ದಾನೆ. ಇದನ್ನು ಅರ್ಥ ಮಾಡಿಕೊಳ್ಳಿ. ನನ್ನ ದುಡಿಮೆಯೂ ಬಹಳ ದೊಡ್ಡದಿದೆ. ಇದನ್ನು ಅರ್ಥ ಮಾಡಿಕೊಳ್ಳಿ. ಯಡಿಯೂರಪ್ಪರನ್ನು ಯಾರು ಯಾರು ಹೇಗೆ ನಡೆಸಿ ಕೊಂಡರು ಎಂಬುದು ಗೊತ್ತಿದೆ. ವಿಜಯೇಂದ್ರ ಎಂಎಲ್ಸಿ ಆಗಬೇಕೆಂದು ಮೊದಲು ಹೇಳಿದವನು ನಾನು. ಬೇರೆಯವರ ಬಗ್ಗೆ ಮಾತಾಡವಾಗ ಎಲ್ಲಾ ಯೋಚನೆ ಮಾಡಿ. ವಿಜಯೇಂದ್ರಗೆ 41 ವರ್ಷ ನನಗೆ 71 ವರ್ಷ. ನನಗೂ ವಿಜಯೇಂದ್ರನಿಗೂ ಯಾಕೆ ಪೈಪೋಟಿ ತರುತ್ತೀರಾ? ಈ ಸಮಾಜಕ್ಕೆ ನನ್ನದೆ ಆದ ಕೊಡುಗೆ ಇದೆ. ಸೋಮಣ್ಣನ ಶಕ್ತಿಯೂ ಇದೆ ಎಂದು ಸಭೆಯಲ್ಲಿ ಹೇಳಿದರು.

ವಿಜಯೇಂದ್ರ ವರುಣಾದಲ್ಲಿ ಆದರೂ ಸ್ಪರ್ಧಿಸಲಿ, ಹನೂರಿನಲ್ಲಾದರೂ ಸ್ಪರ್ಧಿಸಲಿ. ಹೈಕಮಾಂಡ್ ಹೇಳಿದಂತೆ ಅವರ ಸ್ಪರ್ಧೆ ನಡೆಯುತ್ತೆ. ನನ್ನ ಕ್ಷೇತ್ರದ ಜನ ನನ್ನನ್ನು ತಲೆ ಮೇಲೆ ಹೊತ್ತು ಕೊಂಡು ಮೆರೆಯುತ್ತಿದ್ದಾರೆ. ಮೊದಲು ನೀವು ಸರಿಯೋಗಿ. ನನಗೆ ನನ್ನದೆ ಆದ ಕ್ಷೇತ್ರವಿದೆ ಎಂದು ಸಭೆಯಲ್ಲಿ ವಿ. ಸೋಮಣ್ಣ ಆಕ್ರೋಶದ  ನುಡಿಗಳನ್ನಾಡಿದರು.

Key words: BY Vijayendra Vs. V.Somanna–election- campaign -meeting.