ಉಪಚುನಾವಣೆ: ಪ್ರತಿಷ್ಟೆ ಬಿಟ್ಟು ಸಂಘಟಿತ ಪ್ರಚಾರ ಮಾಡುವಂತೆ ಸಚಿವರಿಗೆ ಸಿಎಂ ಬಿಎಸ್ ವೈ ಸೂಚನೆ…

kannada t-shirts

ಬೆಂಗಳೂರು,ಅಕ್ಟೋಬರ್,22,2020(www.justkannada.in):  ಆರ್.ಆರ್ ನಗರ ಮತ್ತು ಶಿರಾ ಕ್ಷೇತ್ರದ ಉಪಚುನಾವಣೆ ಪ್ರತಿಷ್ಟೆಯಾಗಿದೆ. ಹೀಗಾಗಿ ಸಚಿವರು ಪ್ರತಿಷ್ಟೆ ಬಿಟ್ಟು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸೂಚಿಸಿದರು.jk-logo-justkannada-logo

ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಉಪಚುನಾವಣೆಗಳ ಬಗ್ಗೆ ಚರ್ಚೆ ನಡೆಸಿದ್ದು ಈ ವೇಳೆ ಸಚಿವರಿಗೆ ಸಿಎಂ ಬಿಎಸ್ ವೈ ಸೂಚನೆ ನೀಡಿದ್ದಾರೆ. ಸಚಿವರು ಸಂಘಟಿತ ಪ್ರಚಾರ ಮಾಡಬೇಕು. ಎರಡು ಕ್ಷೇತ್ರಗಳ ಉಪಚುನಾವಣೆ ಪ್ರತಿಷ್ಟೆಯಾಗಿದೆ. ಎರಡು ಕ್ಷೇತ್ರಗಳನ್ನು ಗೆಲ್ಲಬೇಕು ಎಂದರು.By-election-CM BS yeddyurappa- instructs -ministers - organize -campaigns ...

ಎಲೆಕ್ಷನ್ ರಿಸಲ್ಟ್ ಸರ್ಕಾರದ ಅಭಿವೃದ್ಧಿಯ ಕನ್ನಡಿ. ಹೀಗಾಗಿ ಇದನ್ನ ನೆನಪಿನಲ್ಲಿಟ್ಟುಕೊಳ್ಳಿ. ವಿವಾದಿತ ಹೇಳಿಕೆಗಳನ್ನ ನೀಡದೇ ಪ್ರಚಾರ ನಡೆಸಿ ಎಂದು ಸಿಎಂ ಬಿಎಸ್ ವೈ ಸೂಚಿಸಿದರು.

Key words: By-election-CM BS yeddyurappa- instructs -ministers – organize -campaigns …

website developers in mysore