ಮತ ಓಲೈಕೆಗಾಗಿ ಬಟ್ಲರ್ ತಮಿಳು : ಮುಜುಗರಕ್ಕೀಡಾದ ಶಾಸಕ

ದಾವಣಗೆರೆ, ಡಿಸೆಂಬರ್,26,2020(www.justkannada.in)  : ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಗ್ರಾಮದಲ್ಲಿ ತಮಿಳು ಮತದಾರರ ಓಲೈಕೆಗಾಗಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಬಟ್ಲರ್ ತಮಿಳು ಮಾತನಾಡಲು ಮುಂದಾದ ಸಂಗತಿ ಬೆಳಕಿಗೆ ಬಂದಿದೆ.Teachers,solve,problems,Government,bound,Minister,R.Ashok

ಡಿ.27ರಂದು ನಡೆಯಲಿರುವ ಗ್ರಾಪಂ ಚುನಾವಣೆಯ 2ನೇ ಹಂತದ ಅಂಗವಾಗಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಶಾಸಕರು ಹಾಗೂ ಸಚಿವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

 

ಚಿನ್ನಿಕಟ್ಟೆಯ ತಮಿಳು ಕಾಲೋನಿಯ ನಿವಾಸಿಗಳೊಂದಿಗೆ ತಮಿಳಿನಲ್ಲಿ ಮಾತುಕತೆ ನಡೆಸಲು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಪಟ್ಟ ಪಾಡು ಅಷ್ಟಿಷ್ಟಲ್ಲ. ಹೌದು, ತಮಿಳು ಬಾರದಿದ್ದರೂ ಅರ್ಧಂಬರ್ಧ ಮಾತನಾಡಿದ ಶಾಸಕ ಮತದಾರರ ಓಲೈಕೆಗೆ ಮುಂದಾದರು.

Butler-Tamil-Vote-Olayake-Embarrassed-MLA

ವಿಪರ್ಯಾಸವೆಂದರೆ ಸ್ಥಳೀಯರು ಕನ್ನಡದಲ್ಲಿ ಮಾತನಾಡಿದರು ರೇಣುಕಾಚಾರ್ಯ ತಮಿಳಿನಲ್ಲೇ ಮಾತನಾಡಲು ಮುಂದುವರಿಸಿದರು. ತಮಿಳರಿಗೂ ಜಾತಿಪ್ರಮಾಣ ಪತ್ರ ಕೊಡಿಸಬೇಕೆಂದು ಮನವಿ ಮಾಡಿದ ಸ್ಥಳೀಯರ ಜೊತೆ ಆರಂಭದಲ್ಲಿ ತಮಿಳು ಮಾತನಾಡಿ, ಮುಜುಗರಕ್ಕೀಡಾದ ಶಾಸಕ ನಂತರ ಕನ್ನಡದಲ್ಲಿ ಮಾತಾಡಿ ಸಮಸ್ಯೆ ಬಗೆಹರಿಸುವ ಅಶ್ವಾಸನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

key words :  Butler-Tamil-Vote-Olayake-Embarrassed-MLA