ಸೋಮವಾರದಿಂದ ಮೈಸೂರಿನಲ್ಲಿ ಬಸ್ ಸಂಚಾರ ಆರಂಭ- ಡಿ.ಟಿ.ಓ  ಹೇಮಂತ್ ಕುಮಾರ್.

kannada t-shirts

ಮೈಸೂರು,ಜೂನ್,27,2021(www.justkannada.in):  ಕೋವಿಡ್ ನಿಯಮಗಳನ್ನ ಅನುಸರಿಸಿ ಸೋಮವಾರದಿಂದ ಮೈಸೂರಿನಲ್ಲಿ ಬಸ್ ಸಂಚಾರ ಆರಂಭವಾಗಲಿದೆ ಎಂದು ಡಿ.ಟಿ.ಓ  ಹೇಮಂತ್ ಕುಮಾರ್ ತಿಳಿಸಿದ್ದಾರೆ.jk

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಟಿ.ಓ ಹೇಮಂತ್ ಕುಮಾರ್, 650 ಬಸ್ ಗಳ ಪೈಕಿ ಶೇ.30% ರಷ್ಟು ಬಸ್ ಸಂಚಾರಕ್ಕೆ ಚಿಂತನೆ ನಡೆಸಲಾಗಿದೆ. ಬೆಂಗಳೂರು, ಮಡಿಕೇರಿ, ಚಾಮರಾಜನಗರ ಭಾಗಕ್ಕೆ ಮೊದಲ ಹಂತದಲ್ಲಿ ಬಸ್ ಸಂಚಾರ ನಡೆಸಲಿದೆ. ಹೊರರಾಜ್ಯಗಳಿಗೆ ಸದ್ಯಕ್ಕೆ ಬಸ್ ಸಂಚಾರವಿಲ್ಲ ಎಂದು ಮಾಹಿತಿ ನೀಡಿದರು.

ಹಾಗೆಯೇ ಸರ್ಕಾರದ ನಿಯಮದ ಪ್ರಕಾರ ಶೇ. 50% ಪ್ರಯಾಣಿಕರು ಪ್ರಯಾಣಿಸಲು ಅವಕಾಶವಿರುತ್ತದೆ. ಕೋವಿಡ್ 2ನೇ ಡೋಸ್ ಪಡೆದ ನಿರ್ವಾಹಕರು, ಚಾಲಕರುಗಳಿಗೆ ಮೊದಲ ಆದ್ಯತೆ ನೀಡುತ್ತೇವೆ. ಕೋವಿಡ್ 3ನೇ ಅಲೆಗೆ ಸಂಬಂಧಿಸಿದಂತೆ ಮಕ್ಕಳ ನಿಯಂತ್ರಣಕ್ಕೆ ಯಾವುದೇ ಗೈಡ್ ಲೈನ್ಸ್ ದೊರೆತಿಲ್ಲ ಎಂದು ಡಿ.ಟಿ.ಓ  ಹೇಮಂತ್ ಕುಮಾರ್ ತಿಳಿಸಿದರು.

Key words: Bus – Mysore – Monday- DTO- Hemanth Kumar

website developers in mysore