ಬಿಎಸ್ ವೈ ಮುಳುತ್ತಿರುವ ಹಡಗು ಎಂದ ಸಿದ್ಧರಾಮಯ್ಯಗೆ ತಿರುಗೇಟು: ಯತ್ನಾಳ್ ಉಚ್ಛಾಟನೆ ಕುರಿತು ಸಚಿವ ಎಸ್.ಟಿ ಸೋಮಶೇಖರ್ ಪ್ರತಿಕ್ರಿಯಿಸಿದ್ದು ಹೀಗೆ

ಕಲಬುರಗಿ,ಏಪ್ರಿಲ್,11,2021(www.justkannada.in): ಸಿಎಂ ಬಿಎಸ್  ಯಡಿಯೂರಪ್ಪ ಮುಳುಗುತ್ತಿರುವ ಹಡಗು ಎಂದು ಹೇಳಿಕೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ತಿರುಗೇಟು ನೀಡಿದ್ದಾರೆ.Sanskrit Vivia,8th event,30 people,Ph.D,43graduates,M.Phil,Awarded 

ಕಲ್ಬುರ್ಗಿಯಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಡಿಕೆ ಶಿವಕುಮಾರ್ ಅದಕ್ಕೆ ಡ್ರೈವರ್ . ಇನ್ನು ಎರಡು ರಂಧ್ರ ಕೊರೆಯಲು ಸಿದ್ದರಾಮಯ್ಯರನ್ನು ಸಿದ್ದವಾಗಿದ್ದಾರೆ ಮುಳುಗುವ ಹಡಗು ಕಾಂಗ್ರೆಸ್ ಅವರದ್ದೇ ನೂರೆಂಟು ಸಮಸ್ಯೆ ಇದೆ. ನಾವು ರಂಧ್ರ ಮಾಡಲ್ಲ ಅವರ ಪಕ್ಷದವರೇ ಇದ್ದಾರೆ. ಮಲ್ಲಿಕಾರ್ಜುನ ಖರ್ಗೆ ಪರಮೇಶ್ವರ್ ರಮೇಶ್ ಕುಮಾರ್ ಸೇರಿ ಹಲವರು ರಂಧ್ರ ಮಾಡಿ ಮುಳುಗಿಸಲು ಕಾಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಡಿ ಕೆ ಶಿವಕುಮಾರ್ ಹಡಗು ಮೇಲೆ ಏಳುವುದಿಲ್ಲ ಎಂದು ಲೇವಡಿ ಮಾಡಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್ ಟಿ ಸೋಮಶೇಖರ್, ಅರುಣ್ ಸಿಂಗ್ ನಮಗೆ ಸುಪ್ರೀಂ ಅವರ ನಿರ್ಧಾರವೇ ಅಂತಿಮ. ಎಲ್ಲರ ಅಭಿಪ್ರಾಯ ಕ್ರೋಢಿಕರಿಸಿ ನಿರ್ಧಾರ ಮಾಡುತ್ತಾರೆ. ಸಹದ್ಯೋಗಿಯಾದರೂ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಚೌಕಟ್ಟು ಮೀರಿ‌ ಮಾತನಾಡಿದಾಗ ಕ್ರಮ ಆಗುತ್ತದೆ. ಪಕ್ಷದ  ಹಿತದೃಷ್ಟಿಯಿಂದ ಆಪರೇಷನ್ ಮಾಡಲಿ ನಮಗೇನು ಇಲ್ಲ ಎಂದರು.BSY – sinking- ship- former cm- siddaramaiah Minister- ST Somashekhar.

ಸಹಕಾರ ಇಲಾಖೆಯ ಶಿಸ್ತು ಕ್ರಮದ ಉದಾಹರಣೆ ನೀಡಿದ ಸೋಮಶೇಖರ್, ಸಹಕಾರ ಇಲಾಖೆಯಲ್ಲಿ ಅಕ್ರಮ ಆದಾಗ ಕ್ರಮ ಆಗುತ್ತೆ. ಅದೇ ಯತ್ನಾಳ್ ಗೂ ಸಹಾ ಅನ್ವಯವಾಗುತ್ತೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ . ಅದನ್ನು ಉಸ್ತುವಾರಿ ನೋಡಿಕೊಳ್ಳುತ್ತಾರೆ ಎಂದರು.

Key words: BSY – sinking- ship- former cm- siddaramaiah Minister- ST Somashekhar.