ಬಿಎಸ್ ವೈ ಶಾರ್ಟ್ ಟೆಂಪರ್: ಅವರಿಗೆ ತಾಳ್ಮೆ ಇಲ್ಲ: ಬಿಜೆಪಿ ಸರ್ಕಾರದ ಆಯುಷ್ಯ ಕುರಿತು ಭವಿಷ್ಯ ನುಡಿದ ಎಂಎಲ್ ಸಿ ಬಸವರಾಜ ಹೊರಟ್ಟಿ…

ಹುಬ್ಬಳ್ಳಿ,ಜು,26,2019(www.justkannada.in): ಯಡಿಯೂರಪ್ಪ ಶಾರ್ಟ್ ಟೆಂಪರ್, ಕುಮಾರಸ್ವಾಮಿ ಅವರಿಗೆ ತಾಳ್ಮೆ ಇತ್ತು , ಆದ್ರೆ ಆ ತಾಳ್ಮೆ ಬಿಎಸ್ ವೈ ಗೆ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ್ರು ಬಹಳ ದಿನ ಸರ್ಕಾರ ನಡೆಯೋದಿಲ್ಲ ಎಂದು ಜೆಡಿಎಸ್ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಭವಿಷ್ಯ ನುಡಿದರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ  ಬಿಎಸ್ ಯಡಿಯೂರಪ್ಪಗೆ ಶುಭ ಹಾರೈಸಿದ ಬಸವರಾಜ ಹೊರಟ್ಟಿ, ಬಿಎಸ್ ವೈ ಅವರಿಗೆ ದೇವರ ಒಳ್ಳೆಯದು ಮಾಡಲಿ. ಆದ್ರೆ ಯಡಿಯೂರಪ್ಪ ಸರ್ಕಾರ ಸುಭದ್ರ ಸರ್ಕಾರವಾಗಲು ಸಾಧ್ಯವಿಲ್ಲ. ಯಡಿಯೂರಪ್ಪ ಶಾರ್ಟ್ ಟೆಂಪರ್, ಕುಮಾರಸ್ವಾಮಿ ಅವರಿಗೆ ತಾಳ್ಮೆ ಇತ್ತು , ಆದ್ರೆ ಆ ತಾಳ್ಮೆ ಬಿ ಎಸ್ ವೈ ಗೆ ಇಲ್ಲಾ. ಬಿಜೆಪಿ ಅಧಿಕಾರಕ್ಕೆ ಬಂದ್ರು ಬಹಳ ದಿನ ಸರ್ಕಾರ ನಡೆಯೋದಿಲ್ಲ ಎಂದು ಹೇಳಿದರು.

ಅತೃಪ್ತ ಶಾಸಕರನ್ನು ಸಚಿವರನ್ನಾಗಿ ನೀಡೋ ಭರವಸೆ ಬಿಜೆಪಿಯವರ ನೀಡಿದ್ದಾರೆ. ಅತೃಪ್ತರನ್ನು ನಿಭಾಯಿಸುವುದು ಬಿಜೆಪಿಗೆ ಬಹಳ‌ ಕಷ್ಟ ಎಂದು ಹೇಳಿದ ಬಸವರಾಜ ಹೊರಟ್ಟಿ,  ಮೂರು ಜನ ಶಾಸಕರ ಅನರ್ಹ ವಿಚಾರ ಸಂಬಂಧ ಸ್ಪೀಕರ್ ಬಹಳ ವಿಚಾರಮಾಡಿ ‌ನಿರ್ಧಾರ ಕೈಗೊಂಡಿದ್ದಾರೆ. ಶಾಸಕರು ಅನರ್ಹ ಮಾಡಿದ್ದು, ಸರಿಯಾದ ಕ್ರಮ. ರಾಜ್ಯದಲ್ಲಿ ಸ್ಥಿರವಾದ ಸರ್ಕಾರ ಕೊಡಲು ಸಾಧ್ಯವಿಲ್ಲ. ಕೇಂದ್ರದ ಬಿಜೆಪಿ ನಾಯಕರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಇಂದು ಕಾಂಗ್ರೆಸ್ ಬಿಟ್ಟವರು ನಾಳೆ ಬಿ ಜೆ ಪಿ ಬಿಡುವುದಿಲ್ಲ ಅನ್ನೋದಕ್ಕೆ ಏನ್ ಗ್ಯಾರಂಟಿ?  ಮೈತ್ರಿ ಸರ್ಕಾರದಲ್ಲಿ ಬಹಳ ಜನ ಟ್ರಬಲ್ ಶೂಟರ್ ಇದ್ರು, ಆದ್ರೆ ಬಿಜೆಪಿಯಲ್ಲಿ ಟ್ರಬಲ್ ಕ್ರಿಯೇಟರ್ ಇದ್ದಾರೆ ಎಂದು ಬಿಜೆಪಿ ನಾಯಕರಿಗೆ  ಎಚ್ಚರಿಕೆ ನೀಡಿದರು.

Key words: BS Yeddyurappa- Short Temper- no patience-MLC Basavaraja horatti