‘’ಲಂಚ ನೀಡುವಂತೆ ಆವಾಜ್’’, ಕಿರಿಯ ಆರೋಗ್ಯ ಸಹಾಯಕಿ ಅಮಾನತು…!

ರಾಯಚೂರು,ಡಿಸೆಂಬರ್,28,2020(www.justkannada.in) : ತಾಯಿ ಕಾರ್ಡ್ ಮಾಡಿಕೊಡಲು ಲಂಚ ನೀಡುವಂತೆ ಆವಾಜ್ ಹಾಕಿದ ಹಿನ್ನೆಲೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿ ಸಾವಿತ್ರಿ ಎಂಬುವರನ್ನು ಅಮಾನತು ಮಾಡಲಾಗಿದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಲ್ಲದಗುಡ್ಡ ಆರೋಗ್ಯ ಉಪಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಸಾವಿತ್ರಿ ತಾಯಿ ಕಾರ್ಡ್ ಗೆ ಹಣ ನೀಡುವಂತೆ ಮಹಿಳೆಯೊಬ್ಬರ ಸಂಬಂಧಿಕರಿಗೆ ಅವಾಜ್ ಹಾಕಿದ್ದಾರೆ. ಜೋರು ಧ್ವನಿಯಲ್ಲಿ 200 ರೂ. ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ.

Bribery,Awaaz,given,Young,health,aide.suspended ...ಆಸ್ಪತ್ರೆಗೆ ಬರುವವರಿಗೆ ಇದೇ ರೀತಿ ಹಣಕ್ಕೆ ಬೇಡಿಕೆ ಇಟ್ಟು ಹಣ ಪಡೆಯುತ್ತಿದ್ದರಂತೆ. ಇನ್ನು ಸಾವಿತ್ರಿ ಲಂಚಕ್ಕೆ ಆವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಡಿಎಚ್ಒ ರಾಮಕೃಷ್ಣ ಸಾವಿತ್ರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.

key words : Bribery-Awaaz-given-Young-health-aide-suspended …