BREAKING NOW : OBCಗೆ ಪರಿಣಾಮಕಾರಿ ಮೀಸಲು ಒದಗಿಸಬೇಕು :ನ್ಯಾ.ಕೆ. ಭಕ್ತವತ್ಸಲ ಸಮಿತಿ.

OBC-reservation-bhakthavasthla-committee

 

ಬೆಂಗಳೂರು, ಜು.21, 2022 : (www.justkannada.in news)ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲು ಸಮರ್ಥನೀಯ ಎಂದು ನ್ಯಾ.ಕೆ. ಭಕ್ತವತ್ಸಲ ಸಮಿತಿ ಸಲಹೆ ನೀಡಿದೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ವರದಿ ಸಲ್ಲಿಸಿರುವ ಸಮಿತಿ, ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಹಿಂದುಳಿದ ವರ್ಗದಲ್ಲೇ ಎ ಮತ್ತು ಬಿ ಎಂದು ಮರು ವರ್ಗೀಕರಣ ಮಾಡಬೇಕು.

ಮುಂದಿನ ಅಂದರೆ 2027 ಅಥವಾ 2028ಕ್ಕೆ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಬಿಸಿಗೆ ಪರಿಣಾಮಕಾರಿ ಮೀಸಲು ಒದಗಿಸಬೇಕು.

ಬಿಬಿಎಂಪಿ ಯಲ್ಲಿ ಮೇಯರ್, ಉಪ ಮೇಯರ್ ಹುದ್ದೆ 30 ತಿಂಗಳಿರುವಂತೆ ಇತರೆ ಸ್ಥಳೀಯ ಸಂಸ್ಥೆ ಗಳಿಗೂ ಅನ್ವಯಿಸಿ. ಕಾಯ್ದೆಯ ತಿದ್ದುಪಡಿ ಮಾಡಿ. ಒಟ್ಟಾರೆ ಮೀಸಲಾತಿ 50% ಮೀರ ಬಾರದು.

key words : OBC-reservation-bhakthavasthla-committee