ಸಿದ್ಧರಾಮಯ್ಯ ಮತ್ತೆ ಸಿಎಂ ಆಗಲಿ ಎಂದ ಶಾಸಕ ಜಮೀರ್ ಗೆ ಬಿ.ಕೆ ಹರಿಪ್ರಸಾದ್ ಟಾಂಗ್.

kannada t-shirts

ಬೆಂಗಳೂರು,ಮೇ,11,2022(www.justkannada.in):  ಸಿದ್ಧರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಹೇಳಿಕೆ ನೀಡಿದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಬಿ.ಕೆ ಹರಿಪ್ರಸಾದ್, ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಜಮೀರ್ ಗೆ ಅ ಮೇಲೆ ಕೇಳೋಕೆ ಹೇಳಿ. ಜಮೀರ್ ಹೇಳಿಕೆ ಅದು ಅವರ ವೈಯಕ್ತಿಕ. ಸಿದ್ದು ಸಿಎಂ ಆಗಲಿ ಎಂದು ಅವರೊಬ್ಬರೇ ಹೇಳಿದ್ದು.  ನಾವು 80 ಮಂದಿಯಲ್ಲಿ ಯಾರೊಬ್ಬರು ಆ ರೀತಿ ಹೇಳಿಲ್ಲ. ಸಿಎಂ ಆಯ್ಕೆ ಹೇಗೆ ಎಂದು ಕಾಂಗ್ರೆಸ್ ನಾಯಕರಿಗೆ ಗೊತ್ತು.  ಸಿಎಂ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿಎಂ ಆಗಲಿ ಅಂತಾ ಪ್ರಾರ್ಥನೆ ಮಾಡಿ ಎಂದು ಜಮೀರ್ ಅಂದಿದ್ದಾರೆ. ನೀವು ಪ್ರಾರ್ಥನೆ ಮಾಡಿ ಎಂದರು.

Key words: BK Hariprasad- MLA- Jamir ahamad khan- Siddaramaiah – CM -again

website developers in mysore