ಪ್ರಜಾಪ್ರಭುತ್ವ ಮುಗಿಸುವುದಕ್ಕೆ ಬಿಜೆಪಿ ಹೊರಟಿದೆ : ಬಿಎಸ್ ವೈ ವಿರುದ್ಧ ಡಿ.ಕೆ.ಶಿ ಕಿಡಿ

ಬೆಂಗಳೂರು,ಸೆಪ್ಟೆಂಬರ್,20,2020(www.justkannada.in) : ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕೊರನಾ ಹಿನ್ನೆಲೆ 3 ದಿನಕ್ಕೆ ಅಧಿವೇಶನ ಮೊಟಕುಗೊಳಿಸುವಂತೆ ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವ ಮುಗಿಸುವುದಕ್ಕೆ ಬಿಜೆಪಿ ಹೊರಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.jk-logo-justkannada-logoಯಡಿಯೂರಪ್ಪ ಅವರು ನನಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಕೊರೊನಾ ಹಿನ್ನೆಲೆಯಲ್ಲಿ ಅಧಿವೇಶನವನ್ನು ಮೂರು ದಿನಕ್ಕೆ ಮೊಟಕುಗೊಳಿಸಿ ಸಹಕಾರ ನೀಡುವಂತೆ ಕೇಳುತ್ತಿದ್ದಾರೆ. ರಾಜ್ಯದಲ್ಲಿ ಬರ, ನೆರೆ ಸ್ಥಿತಿ, ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಕೇಂದ್ರ ಸರಕಾರ ಪರಿಹಾರ ಕೊಡುತ್ತಿಲ್ಲ. ಈ ಎಲ್ಲದರ ಬಗ್ಗೆ ಚರ್ಚೆಯಾಗಬಾರದೇ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

BJP-end-democracy-Going-out-BSK vs DKshi-spark

ಸದನ ಜಾಸ್ತಿ ನಡೆದರೆ ಇವರ ಭ್ರಷ್ಟಚಾರ ಬೆಳಕಿಗೆ ಬರುತ್ತದೆ. ಇವರು ಸಿಕ್ಕಿ ಹಾಕಿಕೊಳ್ಳುತ್ತಾರೆ. ಹೀಗಾಗಿ, ಸರಕಾರವು ಮಾಡಿರುವ ಭ್ರಷ್ಟಚಾರಕ್ಕೆ ನಾವು ಸಹಕಾರ ನೀಡುವುದಿಲ್ಲ. ಸಿಎಂ ಬಿಎಸ್ ವೈ ಅಧಿವೇಶನವನ್ನು 3 ದಿನಕ್ಕೆ ಮೊಟಕುಗೊಳಿಸುವಂತೆ ಕರೆ ಮಾಡಿದ್ದು ತಪ್ಪು ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

key words : BJP-end-democracy-Going-out-BSK vs DKshi-spark