ಬಿಜೆಪಿ ಕಾರ್ಯಕರ್ತರೇ ಮೈಮರೆಯಬೇಡಿ: ಸಿದ್ಧರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ಬರುತ್ತೆ ಎಂದ ಸಂಸದ ಪ್ರತಾಪ್ ಸಿಂಹ.

ಮೈಸೂರು,ಫೆಬ್ರವರಿ,24,2023(www.justkannada.in): ಬಿಜೆಪಿ ಕಾರ್ಯಕರ್ತರೇ ಮೈಮರೆಯಬೇಡಿ: ಸಿದ್ಧರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ಬರುತ್ತೆ ಎಂದು ಮೈಸೂರು-ಕೊಡಗು  ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಂಸದ ಪ್ರತಾಪ್ ಸಿಂಹ,  ಬಿಜೆಪಿ ಕಾರ್ಯಕರ್ತರೇ ಮೈಮರೆಯಬೇಡಿ. ಮೈಮರೆತರೆ ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಬರುತ್ತದೆ.  ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬರುತ್ತೆ ಎಂದರು.

ಸಿದ್ಧರಾಮಯ್ಯ ಪಿಎಫ್ ಐ ಮುಖಂಡರ ಮೇಲಿದ್ದ ಕೇಸ್ ವಾಪಸ್ ಪಡೆದರು.  ಇದರ ಪರಿಣಾಮ  2ಡಜನ್ ಹಿಂದೂಗಳ ಹತ್ಯೆಯಾಯಿತು.  ಈಗ ಮತ್ತೆ ಸಿದ್ಧರಾಮಯ್ಯ ಸಿಎಂ ಆಗಲು  ಹವಣಿಸುತ್ತಿದ್ದಾರೆ. ಹೀಗಾಗಿ ನಮ್ಮ ಕಾರ್ಯಕರ್ತರು ಮೈಮರೆತರೆ  ತಾಲಿಬಾನ್ ಸರ್ಕಾರ ಬರುವ ಸಾಧ್ಯತೆ ಇದೆ ಎಂದಿದ್ದಾರೆ.

Key words: BJP -workers – MP Pratap Simha – Siddaramaiah-Taliban -government