ಹೆಚ್.ವಿಶ್ವನಾಥ್ ಜತೆ ಬಿಜೆಪಿ ಪಕ್ಷ ನಿಲ್ಲುತ್ತೆ- ಸಚಿವ ರಮೇಶ್ ಜಾರಕಿಹೊಳಿ ಭರವಸೆ…

ಬೆಳಗಾವಿ, ಡಿಸೆಂಬರ್,2,2020(www.justkannada.in):   ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹ ಎಂದು ಹೈಕೋರ್ಟ್ ಆದೇಶ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಹೆಚ್.ವಿಶ್ವನಾಥ್ ಪರ ಬಿಜೆಪಿ ನಿಲ್ಲತ್ತೆ ಎಂದು ಭರವಸೆ ನೀಡಿದ್ದಾರೆ.logo-justkannada-mysore

ಸರ್ಕಾರದ ವಿರುದ್ಧ ಹೆಚ್.ವಿಶ್ವನಾಥ್ ಅಸಮಾಧಾನ ಹೊರ ಹಾಕಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ,  ಸರ್ಕಾರದ ವಿರುದ್ಧ ಹೆಚ್.ವಿಶ್ವನಾಥ್ ಮಾತನಾಡಿಲ್ಲ. ನಾನು ಅವರು ಮಾತನಾಡಿರುವುದನ್ನ ನೋಡಿದ್ದೇನೆ. ಸರ್ಕಾರದ ವಿರುದ್ದವಾಗಿ ಹೇಳಿಕೆ ನೀಡಿಲ್ಲ. ಅವರ ಪರವಾಗಿ ಬಿಜೆಪಿ ನಿಲ್ಲುತ್ತದೆ ಎಂದರು.bjp-will-stand-with-h-vishwanath-minister-ramesh-jarakiholi

ಸಿಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ಕುರಿತು ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ, ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಸಿಪಿ ವೈ ಅವರನ್ನ ಸಚಿವರನ್ನಾಗಿ ಮಾಡ್ತೀನಿ ಅಂದಿದ್ದಾರೆ. ಈ ಬಗ್ಗೆ ಅವರನ್ನೇ ಕೇಳಬೇಕು ಎಂದು ನುಡಿದರು.

Key words:  BJP- will stand –with- H. Vishwanath- Minister -Ramesh jarakiholi