ಸುತ್ತೂರು ಶ್ರೀಗಳ ಅರ್ಶೀವಾದ ಪಡೆದ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ. ಈ.ಸಿ. ನಿಂಗರಾಜ್ ಗೌಡ.

ಮೈಸೂರು,ಸೆಪ್ಟಂಬರ್,24,2021(www.justkannada.in): ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಮತ್ತು ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ಡಾ. ಈ.ಸಿ.ನಿಂಗರಾಜ್ ಗೌಡ ಅವರು ಇಂದು ಬೆಳಿಗ್ಗೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿರವರ ಅರ್ಶೀವಾದ ಪಡೆದರು.

ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಎಸ್. ಶಿವರಾಜಪ್ಪ ರವರು, ಮಾಜಿ ಸೆನೆಟ್ ಸದಸ್ಯರಾದ ಜಗದೀಶ್, ಡಾ.ಟಿ.ಬಿ.ಮೃತ್ಯುಂಜಯ, ಮಂಜುನಾಥ್ ಗೌಡ, ಎಂ.ಎಸ್.ಉಮಶಂಕರ್ ಆರಾಧ್ಯ, ಚೇತನ್, ಹೆಚ್.ವಿನೋದ್, ಕೆ.ವಿವೇಕ್ ಗೌಡ, ಸಚ್ಚೀನ್, ಪರಶಿವಮೂರ್ತಿ, ಕಾರ್ತಿಕ್ ಮತ್ತಿತರಿದ್ದರು.

Key words:  BJP- ticket- aspirant – E.C. Ningaraj Gowda-visit-suttur shri