ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಭೇಟಿಯಾಗಿ ಚರ್ಚಿಸಿದ ಶಾಸಕ ಉಮೇಶ್ ಕತ್ತಿ : ಇಟ್ಟ ಬೇಡಿಕೆ ಏನು ಗೊತ್ತೆ..?

kannada t-shirts

ನವದೆಹಲಿ,ಫೆ,12,2020(www.justkannada.in): ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಇಂದು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರನ್ನ ಭೇಟಿಯಾಗಿ ತಮಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.

ಸಹೋದರ ರಮೇಶ್ ಕತ್ತಿ ಜತೆ ನವದೆಹಲಿಗೆ ತೆರಳಿರುವ ಶಾಸಕ  ಉಮೇಶ್ ಕತ್ತಿ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರನ್ನ ಭೇಟಿಯಾಗಿ ಚರ್ಚಿಸಿದರು. ಇದೇ ವೇಳೆ ಹಿರಿತನ ಪರಿಗಣಿಸಿ ತಮಗೆ ಸಚಿವ ಸ್ಥಾನ ನೀಡಿ.  ಇಲ್ಲದಿದ್ದರೇ ಸಹೋದರ ರಮೇಶ್ ಕತ್ತಿಗೆ ರಾಜ್ಯಸಭೆ ಸ್ಥಾನ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ರಮೇಶ್ ಕತ್ತಿ ಅಂದು ಲೋಕಸಭೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ.  ಅಂದು ಸ್ಥಾನಮಾನ ನೀಡುವುದಾಗಿ ರಮೇಶ್ ಕತ್ತಿಗೆ ಭರವಸೆ ನೀಡಿದ್ದೀರಿ. ಕೊಟ್ಟ ಭರವಸೆಯಂತೆ ರಾಜ್ಯಸಭೆಗೆ ಟಿಕೇಟ್ ನೀಡಿ ಎಂದು ಶಾಸಕ ಉಮೇಶ್ ಕತ್ತಿ ಜೆ.ಪಿ ನಡ್ಡಾ ಅವರ ಬಳಿ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

key words: BJP President -JP Nadda –meets- MLA Umesh

website developers in mysore