ನಾವಿಬ್ಬರೂ ಸಚಿವರಾಗುವ ಕಾಲ ದೂರ ಇಲ್ಲ- ಬಿಜೆಪಿ ಶಾಸಕ ಉಮೇಶ್ ಕತ್ತಿ…

ಬೆಳಗಾವಿ,ಜು,28,2020(www.justkannada.in):  ನಾನು ಮತ್ತು ಶಾಸಕ ತಿಪ್ಪಾರೆಡ್ಡಿ ಸಚಿವರಾಗುವ ಕಾಲ ದೂರವಿಲ್ಲ ಎಂದು ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.jk-logo-justkannada-logo

ಬೆಳಗಾವಿಯ ಹುಕ್ಕೇರಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಉಮೇಶ್ ಕತ್ತಿ, ನಾನು ಸಚಿವನಾಗುವ ಕಾಲ ದೂರವಿಲ್ಲ. ನಾನು ಜಿ.ಹೆಚ್ ತಿಪ್ಪಾರೆಡ್ಡಿ ಸಚಿವರಾಗುತ್ತೇವೆ. ಸಚಿವ ಸಂಪುಟ ವಿಸ್ತರಣೆ ಸಿಎಂ ಬಿಎಸ್ ಯಡಿಯೂರಪ್ಪಗೆ ಬಿಟ್ಟ ವಿಚಾರ ಎಂದು ತಿಳಿಸಿದರು.

ಸಿಎಂ ಬಿಎಸ್ ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.  ಪ್ರವಾಹ ಬಂದಾಗ ಒಬ್ಬರೆ ನಿಂತು ಒಳ್ಳೆಯ ಕೆಲಸ ಮಾಡಿದ್ದರು. ಕೊರೋನಾ ವೇಳೆಯಲ್ಲೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಿದ್ಧರಾಮಯ್ಯ  ಮತ್ತು ಡಿ.ಕೆ ಶಿವಕುಮಾರ್ ಆರೋಪ ಸರಿಯಿಲ್ಲ. ಆರೋಪ ಮಾಡುವುದನ್ನ ಬಿಟ್ಟು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಶಾಸಕ ಉಮೇಶ್ ಕತ್ತಿ ಸಲಹೆ ನೀಡಿದರು.

Key words: BJP- MLA- Umesh katti- becoming -minister.