ಬಿಜೆಪಿ ಪ್ರಣಾಳಿಕೆ ಬೋಗಸ್: ಯಾವುದನ್ನೂ ಈಡೇರಿಸಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ ಟೀಕೆ.

ಗದಗ,ಮೇ,1,2023(www.justkannada.in):  ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಬೋಗಸ್. ಅದರಲ್ಲಿ ಯಾವುದೇ ಆಶ್ವಾಸನೆಯನ್ನ ಬಿಜೆಪಿ ಈಡೇರಿಸುವುದಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿದರು.

ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬೆಳ್ಳಟ್ಟಿ ಗ್ರಾಮದಲ್ಲಿ ಮಾತಾನಾಡಿದ ಸಿದ್ಧರಾಮಯ್ಯ,  2018 ರಲ್ಲಿ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಬಿಜೆಪಿ 600 ಭರವಸೆಗಳನ್ನು ನೀಡಿತ್ತು. ಆದರೆ ಅವುಗಳಲ್ಲಿ 55 ಭರವಸೆಗಳನ್ನು ಮಾತ್ರ ಈಡೇರಿಸಿದೆ. 2013 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 165 ಆಶ್ವಾಸನೆಗಳ ಘೋಷಣೆ ಮಾಡಿತ್ತು. ಅವುಗಳ ಪೈಕಿ 158 ಈಡೇರಿಸಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇರುವ ವ್ಯತ್ಯಾಸ ಇದೇ ಎಂದರು.

ರಾಜ್ಯದಲ್ಲಿ ಬಸವರಾಜ  ಬೊಮ್ಮಾಯಿ ಮತ್ತವರ ತಂಡ ಲೂಟಿ ಮಾಡಿದೆ. ಗುತ್ತಿಗೆದಾರರರು ಮೋದಿಗೆ ಪತ್ರ ಬರೆದಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಇಲ್ಲ. ವಿಜಯೇಂದ್ರನ ಮನೆಯಲ್ಲಿ ಪಿಎಸ್ ಐ ನೇಮಕಾತಿ ಹಗರಣ ನಡೆದಿದೆ.  ಆದರೆ ಸಿಎಂ ಬೊಮ್ಮಾಯಿ ದಾಖಲೆ ಕೊಡಿ ಅಂತಾರೆ. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ  ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದರು. ಇದಕ್ಕಿಂತ ಇನ್ನೇನು ದಾಖಲೆ ಬೇಕು ಎಂದು ಸಿದ್ಧರಾಮಯ್ಯ ಟಾಂಗ್ ನೀಡಿದರು.

Key words: BJP-Manifesto – bogus- Former CM –Siddaramaiah