ಪ್ರವೀಣ್ ನೆಟ್ಟಾರು ಪತ್ನಿಗೆ ಕಾಯಂ ಉದ್ಯೋಗ ನೀಡದೆ ಬಿಜೆಪಿ ಮೋಸ ಮಾಡಿದೆ- ಸಚಿವ ರಾಮಲಿಂಗರೆಡ್ಡಿ ಕಿಡಿ.

ಬೆಂಗಳೂರು,ಮೇ,27,2023(www.justkannada.in): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರವೀಣ್ ನೆಟ್ಟಾರು ಪತ್ನಿಗೆ ಅನುಕಂಪದ ಆಧಾರದಲ್ಲಿ ನೀಡಿದ್ದ ಕೆಲಸವನ್ನ ವಾಪಸ್ ಪಡೆದಿದೆ ಎಂಬ ಆರೋಪ ಕುರಿತು ಸಚಿವ ರಾಮಲಿಂಗರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಪ್ರವೀಣ್  ನೆಟ್ಟಾರುಗೆ ಪತ್ನಿಗೆ ಬಿಜೆಪಿ ಮೋಸ ಮಾಡಿದೆ ಪ್ರವೀಣ್ ನೆಟ್ಟಾರು ಪತ್ನಿಗೆ ತಾತ್ಕಾಲಿಕ ಹುದ್ಧೆ ಯಾಕೆ ಕೊಡಬೇಕಿತ್ತು.  ಬಿಜೆಪಿ ಅಧಿಕಾರದಲ್ಲಿದ್ದಾ ಗ ಕಾಯಂ ಉದ್ಯೋಗವನ್ನೇ ಕೊಡಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ ವಿರುದ್ದ  ಅಶ್ವತ್ ನಾರಾಯಣ್ ಹೇಳಿಕೆ ಸರಿಯಾ..? ಸಿದ್ಧರಾಮಯ್ಯ ವಿರುದ್ದ ಹರೀಶ್ ಪೂಂಜಾ ಸಹ ಹೇಳಿಕೆ ಕೊಟ್ಟಿದ್ದಾರೆ. 24 ಹಿಂದೂ ಕಾರ್ಯಕರ್ತರನ್ನ ಕೊಲೆ ಮಾಡಿದ್ದಾರೆ ಎಂದಿದ್ದಾರೆ ಇದು ದ್ವೇಷದ ರಾಜಕಾರಣ ಎಂದು ರಾಮಲಿಂಗರೆಡ್ಡಿ ಹರಿಹಾಯ್ದರು.

Key words: BJP -cheated – Praveen Nettaru- wife-Minister -Ramalingareddy