ಬೆಳಗಾವಿ ಕರ್ನಾಟಕದಲ್ಲಿದೆ. ಇಲ್ಲೇ ಇರುತ್ತೆ- ಸತೀಶ್ ಜಾರಕಿಹೊಳಿ….

ಕೊಳ್ಳೇಗಾಲ,ಜನವರಿ,30,2021(www.justkannada.in):  ಬೆಳಗಾವಿ ಕಾರವಾರ ನಮ್ಮದು ಎಂದು ಖ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಸಿಎಂಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.jk

ಕೊಳ್ಳೇಗಾಲದಲ್ಲಿ ಇಂದು ಗಡಿ ವಿವಾದ ಕುರಿತು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಬೆಳಗಾವಿ ಕರ್ನಾಟಕದಲ್ಲಿದೆ. ಇಲ್ಲೇ ಇರುತ್ತೆ.  ಮಹಾರಾಷ್ಟ್ರ ಹೇಳಿಕೆ ನೀಡೋದು ಹೊಸದೇನಲ್ಲ. ಗಡಿ ವಿವಾದ ಮುಗಿದು ಹೋದ ಅಧ್ಯಾಯ ಎಂದಿದ್ದಾರೆ.Belgaum -Karnataka.-Stay here-Sathish jarakiholi.

ಮಹಾರಾಷ್ಟ್ರ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದರೇ ಏನಾಯ್ತು. ನಾವು ಬೆಳಗಾವಿಯನ್ನ ಬಿಡೋಕೆ ಆಗುತ್ತಾ..?  ರಾಜ್ಯದಿಂದ ಬೇಳಗಾವಿ ಬೇರ್ಪಡಿಸಲು ಅಸಾಧ್ಯ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

Key words: Belgaum -Karnataka.-Stay here-Sathish jarakiholi.