ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ: ಮಹಾರಾಷ್ಟ್ರಕ್ಕೆ ತೆರಳುವ ಸರ್ಕಾರಿ ಬಸ್ ಗಳ ಸಂಚಾರ ಸ್ಥಗಿತ.

ಬೆಳಗಾವಿ,ಡಿಸೆಂಬರ್,7,2022(www.justkannada.in): ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ತೆರಳುವ ಸರ್ಕಾರಿ ಬಸ್ ಗಳ ಸಂಚಾರವನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಪೊಲೀಸರ ಸೂಚನೆ ಮೇರೆಗೆ  ಪರಿಸ್ಥಿತಿ ಸುಧಾರಿಸುವವರೆಗೆ  ಮಹಾರಾಷ್ಟ್ರಕ್ಕೆ ಬಸ್ ಗಳ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ.  ರಾಜ್ಯದ ಹಲವು ಭಾಗಗಳಿಂದ ಮಹಾರಾಷ್ಟ್ರಕ್ಕೆ ಸರ್ಕಾರಿ ಬಸ್ ಗಳು ತೆರಳಬೇಕಿದ್ದವು.

ಚಿಕ್ಕೂಡಿಯಿಂದ ಕರ್ನಾಟಕದ ಗಡಿ ಭಾಗದವರೆಗೆ ಮಾತ್ರ ಬಸ್ ಸಂಚಾರವಿದೆ. 250 ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ.

Key words: belagavi-situation – border-government- buses- stopped- Maharashtra