ಬಸವರಾಜ ಬೊಮ್ಮಾಯಿ ರಾಜ್ಯ ಕಂಡ ಅತ್ಯಂತ ದುರ್ಬಲ ಸಿಎಂ- ವೀರಪ್ಪಮೊಯ್ಲಿ ಟೀಕೆ.

ಚಿಕ್ಕಬಳ್ಳಾಪುರ,ಜುಲೈ,16,2022(www.justkannada.in): ಬಸವರಾಜ ಬೊಮ್ಮಾಯಿ ರಾಜ್ಯ ಕಂಡ ಅತ್ಯಂತ ದುರ್ಬಲ ಸಿಎಂ ಎಂದು ಮಾಜಿ ಸಿಎಂ ವೀರಪ್ಪಮೊಯ್ಲಿ ಟೀಕಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ವೀರಪ್ಪ ಮೊಯ್ಲಿ,  ಬಿಜೆಪಿ ಮತ್ತು ಆರ್ ಎಸ್ ಎಸ್ ನಡುವೆ ಸಿಲುಕಿ ಸಿಎಂ ದುರ್ಬಲವಾಗಿದ್ದಾರೆ.  ಕರ್ನಾಟಕದಲ್ಲಿ ಎರಡು ಅಧಿಕಾರ ಕೇಂದ್ರಗಳಿವೆ.  ಒಂದು ಬಿಜೆಪಿ ಮತ್ತೊಂದು ಆರ್ ಎಸ್ ಎಸ್. ಯಾವುದೋ ರಾಜಕೀಯ ಒಪ್ಪಂದದಿಂದ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಇವರು ರಾಜ್ಯ ಕಂಡ ಅತ್ಯಂತ ದುರ್ಬಲ ಸಿಎಂ ಎಂದರು.

Key words: Basavaraja Bommai – weakest CM -state – Veerappa moily