ಶಾಲಾ ಬಸ್ ಹರಿದು ಸ್ಥಳದಲ್ಲೇ ಎಲ್ ಕೆಜಿ ವಿದ್ಯಾರ್ಥಿ ಸಾವು…

kannada t-shirts

ಬೆಂಗಳೂರು,ಡಿ,16,2019(www.justkannada.in):  ಶಾಲಾ ಬಸ್ ಹರಿದು ಎಲ್ ಕೆಜಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಕಮ್ಮಸಂದ್ರದ ಅನಂತನಗರದಲ್ಲಿ ಈ ಘಟನೆ ನಡೆದಿದೆ. ಇಲ್ಲಿರುವ ಸೆಂಟ್ ಪೀಟರ್ಸ್ ಶಾಲೆಯ ವಿದ್ಯಾರ್ಥಿ ದಿಕ್ಷಿತ್ ಮೃತಪಟ್ಟ ಬಾಲಕ. ಬಾಲಕ ದೀಕ್ಷಿತ್ ಶಾಲಾ ಬಸ್ ನಿಂದ ಕೆಳಗಿಳಿದ ವೇಳೆ ಈ ಘಟನೆ ನಡೆದಿದೆ. ದೀಕ್ಷಿತ್ ಬಸ್ ನಿಂದ ಕೆಳಗಿಳಿದು ಎಡಭಾಗದಲ್ಲಿ ನಡೆದು ಹೋಗುತ್ತಿದ್ದ. ಈ ಸಮಯದಲ್ಲಿ ಇದನ್ನ ಗಮನಿಸದ ಬಸ್ ಚಾಲಕ ರಿವರ್ಸ್ ತೆಗೆದುಕೊಂಡಿದ್ದಾನೆ. ಈ ವೇಳೆ ಬಾಲಕನ ಮೇಲೆ ಶಾಲಾ ಬಸ್ ಹರಿದು ದೀಕ್ಷಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ವಾಹನ ಚಾಲಕನ ವಿರುದ್ದ ಮೃತ ಬಾಲಕನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Key words:Bangalore- School bus –overturn- student-death

website developers in mysore